ಬಂದ್ಯೋಡ್ | ಯುವಕನ ಕೊಲೆ ಪ್ರಕರಣ: ಮತ್ತೆ ಮೂವರು ಆರೋಪಿಗಳ ಬಂಧನ

Update: 2022-07-01 09:48 GMT
ಬಂಧಿತ ಆರೋಪಿಗಳು 

ಕಾಸರಗೋಡು : ಗಲ್ಫ್ ಉದ್ಯೋಗಿ ಸೀತಾಂಗೋಳಿ ಮುಗುವಿನ  ಅಬೂಬಕ್ಕರ್ ಸಿದ್ದಿಕ್ ( 32) ನ ಕೊಲೆಗೆ ಸಂಬಂಧಪಟ್ಟಂತೆ ಮೂವರನ್ನು ವಿಶೇಷ  ತನಿಖಾ ತಂಡ  ಬಂಧಿಸಿದ್ದು , ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.

ಬಂಧಿತರನ್ನು ಮಂಜೇಶ್ವರ ಉದ್ಯಾವರದ  ರಿಯಾಜ್ ಹಸನ್  ( 33) ,  ಉಪ್ಪಳ  ಬಿ . ಟಿ ರಸ್ತೆಯ ಅಬ್ದುಲ್ ರಜಾಕ್ ( 46) ಮತ್ತು ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್ ( 33) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ  ಮಂಜೇಶ್ವರದ ಅಬ್ದುಲ್   ರಹೀಮ್ ಮತ್ತು ಅಬ್ದುಲ್ ಅಝೀಜ್ ನನ್ನು  ಈ ಹಿಂದೆ ಬಂಧಿಸಲಾಗಿತ್ತು .

ಜೂನ್ 29 ರಂದು  ಅಬೂಬಕ್ಕರ್ ಸಿದ್ದಿಕ್ ನನ್ನು  ತಂಡವು ಅಪಹರಿಸಿ ಪೈವಳಿಕೆಯ ಮನೆಯೊಂದರಲ್ಲಿ  ದಿಗ್ಬಂಧನದಲ್ಲಿರಿಸಿ  ಥಳಿಸಿ ಕೊಲೆಗೈಯ್ಯಲಾಗಿತ್ತು. ಬಳಿಕ  ಕಾರೊಂದರಲ್ಲಿ ಬಂದ್ಯೋಡಿನ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಮೃತದೇಹವನ್ನು ತೊರೆದು ತಂಡವು ಪರಾರಿಯಾಗಿತ್ತು. 

ಕೃತ್ಯದಲ್ಲಿ ಶಾಮೀಲಾಗಿರುವ  ಇನ್ನೂ ಐದಕ್ಕೂ ಅಧಿಕ ಮಂದಿ ತಲೆಮರೆಸಿಕೊಂಡಿದ್ದು , ಇವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News