ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ವತಿಯಿಂದ ಸಾಧಕರಿಗೆ ಸನ್ಮಾನ

Update: 2022-07-04 17:43 GMT

ಎಣ್ಣೆಹೊಳೆ: ಬದ್ರಿಯಾ ಜುಮಾಮಸೀದಿ ಆವರಣದಲ್ಲಿ "ಸಮುದಾಯದ ಸಾಧಕರಿಗೆ ಸನ್ಮಾನ" ಕಾರ್ಯಕ್ರಮವನ್ನು ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಅಜೆಕಾರು ನೇತೃತ್ವದಲ್ಲಿ ನಡೆಯಿತು.

ಶೈಕ್ಷಣಿಕ ರಂಗದಲ್ಲಿ ಪದ್ಮಶ್ರಿ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅವರ ವ್ಯಕ್ತಿ ಪರಿಚಯವನ್ನು ರಫೀಕ್ ಮಾಸ್ಟರ್ ನೀಡಿ, ಹರೇಕಳ ಹಾಜಬ್ಬ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಹರೇಕಳ ಹಾಜಬ್ಬ ಅವರು ತಮ್ಮ ಸೇವೆಯು ಸಂಪೂರ್ಣವಾಗಿ ನಿಸ್ವಾರ್ಥವಾಗಿದ್ದು, ನಮ್ಮ ನಾಡ ಒಕ್ಕೂಟ ಹಾಗೂ ಇಡೀ ದೇಶದ ಎಲ್ಲಾರೂ ನನಗೆ ನೀಡಿದ ಗೌರವಕ್ಕೆ ಅಭಾರಿಯಾಗಿದ್ದೇನೆ ಎನ್ನುತ್ತಾ ಸಮುದಾಯದ ಎಲ್ಲಾ ಮಕ್ಕಳು, ಶಿಕ್ಷಣ ವ್ಯವಸ್ಥೆಯಲ್ಲಿ ಮುಂದೆ ಸಾಧನೆಯತ್ತ ಮುನ್ನಡೆಯಬೇಕೆಂದು ಸಲಹೆಯಿತ್ತರು.

ಈ ಸಂದರ್ಭದಲ್ಲಿ ಒಂದೇ ಮಸೀದಿಯಲ್ಲಿ 10 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಬೆಳ್ವೆ ಮಸೀದಿಯ ಇಮಾಮ್ ಮೌಲಾನ ಮುಹಮ್ಮದ್ ರಫೀಕ್, ಹೈಕಾಡಿ ಮಸೀದಿಯ ಮೂಹಜ್ಹಿನ್ ಮುಹಮ್ಮದ್ ಅಶ್ರಫ್, ಎಣ್ಣೆಹೊಳೆ ಮಸೀದಿಯ ಮೂಹಝಿನ್ ಉಮರ್ ಫಾರೂಕ್ ಹರೇಕಳ ಹಾಜಬ್ಬ ಮತ್ತು ಇತರ ಗಣ್ಯರ ಮೂಲಕ ಸನ್ಮಾನಿಸಲಾಯಿತು.

ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಖ್ಯಾತ ಮೂಳೆ ತಜ್ಞರಾದ ಡಾ. ರಿಝ್ವಾನ್ ಅಹಮದ್, ಒಟಿ ಟೆಕ್ನಿಷಿಯನ್ ಹರ್ಷದ್ ಮುನಿಯಾಲು, ಲ್ಯಾಬ್ ಟೆಕ್ನಿಷಿಯನ್ ಅಫ್ರಾಝ್  ಶೇಕ್ ಅಜೆಕಾರು,‌ ಲ್ಯಾಬ್ ಟೆಕ್ನಿಷಿಯನ್ ಸೀಮಾ ಅಜೆಕಾರು ಅವರನ್ನು ಸನ್ಮಾಸಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಪುತ್ತಿಗೆಯ ಶುಹೈಮಾ (97.6%), ಹೈಕಾಡಿಯ ನಸೀಹಾ ( 94.16%), ಹಾಲಾಡಿಯ ಮುಹಮ್ಮದ್ ಆಸೀಲ್ (89%) ಸಿದ್ದಾಪುರ-ಜನ್ಸಾಲೆಯ ಆಯೀಶತ್ ಫವೀಶಾ (97.4%), ಹೈಕಾಡಿಯ ಸಫಾ (97%), ಹೊಸಂಗಡಿಯ ಆಯೀಶಾ ಸಮನ್ (96%), ಹೊಸಂಗಡಿಯ ಶಿಫಾನ (95%) ಅಜೆಕಾರಿನ ಆಯೀಶಾ ಶಿಫಾನ (94%), ಎಣ್ಣೆಹೊಳೆಯ ನಫಿಯ ಖತೀಜಾ (91.5%) ಹಾಗೂ ಅದೇ  ಊರಿನ ನುಸೈಬ (89%) ಅವರನ್ನು ಹರೇಕಳ ಹಾಜಬ್ಬ ಹಾಗೂ ಇತರ ಗಣ್ಯರ ಮೂಲಕ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟದ  ಕೇಂದ್ರ ಸಮಿತಿಯ ಡಾ. ರಿಝ್ವಾನ್ ಅಹಮದ್, ಮುಹಮ್ಮದ್ ಹುಸೇನ್ ಕಾರ್ಕಳ, ಅಬ್ದುಲ್ ಹಮೀದ್ ಮೂಡುಬಿದಿರೆ, ಉಡುಪಿ ಜಿಲ್ಲಾಧ್ಯಕ್ಷರಾದ ಮುಸ್ತಾಕ್ ಅಹಮದ್ ಬೆಳ್ವೆ, ಜಿಲ್ಲಾ ಸಮಿತಿಯ ನಝೀರ್ ಶಾ ಅಜೆಕಾರು, ಹೈದರ್ ಎಣ್ಣೆಹೊಳೆ, ಅನ್ಸಾರ್ ಹೊಸಂಗಡಿ, ಸಗೀರ್ ಹೈಕಾಡಿ, ಖಾಸಿಂ ಕಾರ್ಕಳ,  ಹಾರೂನ್ ರಶೀದ್ ಸಾಸ್ತಾನ, ಕಾರ್ಕಳ ಘಟಕದ ಅಧ್ಯಕ್ಷರಾದ ಶಾಕಿರ್ ಹುಸೇನ್ ಶಿಷಾ, ಹೆಬ್ರಿ ಘಟಕದ ಪಿ.ಎ. ರಹೀಮ್ ಎಣ್ಣೆಹೊಳೆ, ಆಸಿಫ್ ಬೆಳ್ವೆ, ಮುನಾವರ್ ಅಜೆಕಾರು, ಮಮ್ತಾಝ್ ಎಣ್ಣೆಹೊಳೆ ಹಾಗೂ ಸ್ಥಳೀಯ ಮಸೀದಿಯ ಖತೀಬ್ ಪಿ.ಜೆ.ಮದನಿ,‌ ಮಾಜಿ ಅಧ್ಯಕ್ಷರುಗಳು, ಆಡಳಿತ ಕಮಿಟಿಯ ಪದಾಧಿಕಾರಿಗಳು, ಎಣ್ಣೆಹೊಳೆ ಮಸೀದಿಯ ಜಮಾತರು ಹಾಗೂ ಇತರ ಮಸೀದಿಗಳ ಅಧ್ಯಕ್ಷರುಗಳು ಮತ್ತಿತರರು ಉಪಸ್ಥಿತರಿದ್ದರು.

ಮಮ್ತಾಝ್ ಎಣ್ಣೆಹೊಳೆ ಹಾಗೂ ಅರ್ಫಾತ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು. ಸುಹೈಲ್ ಎಣ್ಣೆಹೊಳೆ, ಶಹದ್ ಎಣ್ಣೆಹೊಳೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News