ಕುಚ್ಚೂರು: ದಂಡೆ ಒಡೆದು ಕೃಷಿಭೂಮಿಗೆ ನುಗ್ಗಿದ ನೀರು

Update: 2022-07-06 17:05 GMT

ಹೆಬ್ರಿ: ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಕುಚ್ಚೂರು ಎಡ್ಕಲ್ ಎಂಬಲ್ಲಿ ಬುಧವಾರ ಹೊಳೆಯ ನೀರು ಉಕ್ಕಿ ಹರಿದ ಪರಿಣಾಮ ದಂಡೆ ಒಡೆದು ಗದ್ದೆಗೆ ನೀರು ನುಗ್ಗಿರುವ ಘಟನೆ ನಡೆದಿದೆ.

ದಂಡೆ ಒಡೆದು ಹೊಳೆಯ ನೀರು ಹಾಡಿಮನೆ ಕುಟುಂಬದ ಸುಮಾರು ೧೫  ಎಕರೆ ಗದ್ದೆಗೆ ನುಗ್ಗಿದೆ. ಇದರಿಂದ ಮುಂದೆ ಕೃಷಿ ಚಟುವಟಿಕೆ ನಡೆಸಲು ತುಂಬಾ ಕಷ್ಟಸಾಧ್ಯವಾಗಿದೆ ಎಂದು ಕೃಷಿಕರು ತಿಳಿಸಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News