ಸೇತುವೆ ಬಳಿ ಸ್ಕೂಟರ್ ಪತ್ತೆ: ಸವಾರ ನೀರಿಗೆ ಹಾರಿರುವ ಶಂಕೆ

Update: 2022-07-06 17:06 GMT

ಕಾಪು: ದೆಂದೂರುಕಟ್ಟೆ ಸಮೀಪದ ಕಲ್ಮಂಜೆ ಸೇತುವೆಯಲ್ಲಿ ಸ್ಕೂಟರೊಂದು ಇಂದು ಮಧ್ಯಾಹ್ನ ವೇಳೆ ಪತ್ತೆಯಾಗಿದ್ದು, ಇದರ ಸವಾರ ಸೇತುವೆಯಿಂದ ಹೊಳೆಗೆ ಹಾರಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಸ್ಕೂಟರ್‌ನಲ್ಲಿ ದೊರೆತ ಆಧಾರ್ ಕಾರ್ಡ್ ಮಾಹಿತಿಯಂತೆ ಸವಾರನನ್ನು ದೆಂದೂರುಕಟ್ಟೆ ಸಮೃದ್ಧಿ ನಗರದ ಪುನೀತ್ (28) ಎಂದು ಗುರುತಿಸಲಾಗಿದೆ. ಈತ ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದು, ಮಧ್ಯಾಹ್ನ ಬಾರ್‌ನಲ್ಲಿ ಮದ್ಯ ಸೇವಿಸಿ ಸ್ಕೂಟರ್ ಚಲಾಯಿಸಿಕೊಂಡು ಕಲ್ಮಂಜೆಗೆ ಬಂದಿದ್ದ ಎನ್ನಲಾಗಿದೆ.

ಅಲ್ಲಿ ಆತ ಸ್ಕೂಟರ್ ನಿಲ್ಲಿಸಿ, ಸೇತುವೆಯಿಂದ ಕೆಳಗೆ ಹೊಳೆ ನೀರಿಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸ್ಥಳಕ್ಕೆ ಆಗಮಿಸಿರುವ ಕಾಪು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದು, ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News