ಗೇರುಸೊಪ್ಪೆ ಮಾರ್ಗದಲ್ಲಿ ರಸ್ತೆ ಕುಸಿತ; ಮಾವಿನಗುಂಡಿ ರಸ್ತೆ ಸಂಚಾರ ನಿಷೇಧ

Update: 2022-07-16 12:29 GMT

ಭಟ್ಕಳ: ಹೊನ್ನಾವರದಿಂದ ಶಿವಮೊಗ್ಗ, ಬೆಂಗಳೂರು, ಜೋಗಜಲಪಾತಕ್ಕೆ ಸಂಪರ್ಕಿಸುವ ಹೊನ್ನಾವರ ತಾಲೂಕಿನ ಗೇರುಸೊಪ್ಪ ರಾ.ಹೆ. 69ರಲ್ಲಿ ರಸ್ತೆ ಕುಸಿತ ಉಂಟಾಗಿದ್ದು ಹೊನ್ನಾವರ ತಾಲೂಕಿನ ಗೇರುಸೊಪ್ಪ ಗ್ರಾಮದಿಂದ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಗ್ರಾಮದವರೆಗೆ ರಸ್ತೆ ಸಂಚಾರವನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿದೆ ಎಂದು ವರದಿಯಾಗಿದೆ.

ತಾಲೂಕಿನ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 69ರಲ್ಲಿ  ರಸ್ತೆ ಕುಸಿತದ ಪರಿಣಾಮ ಸುರಕ್ಷತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊನ್ನಾವರದಿಂದ ಸಿದ್ದಾಪುರ, ಜೋಗ, ಸಾಗರ ಕಡೆಗೆ ಹೋಗುವ ವಾಹನಗಳು ಹೊನ್ನಾವರ – ಕುಮಟಾ- ಸಂತೆಗುಳಿ ಮಾರ್ಗವಾಗಿ ಸಿದ್ದಾಪುರ ಮತ್ತು ಹೊನ್ನಾವರ – ಕುಮಟಾ – ಕತಗಾಲ – ಶಿರಸಿ ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News