ಕಾಸರಗೋಡು: ತೆಂಗಿನ ಮರ ಮುರಿದು ಬಿದ್ದು ಬಾಲಕ ಮೃತ್ಯು

Update: 2022-07-16 15:22 GMT

ಕಾಸರಗೋಡು: ತೋಟದಲ್ಲಿದ್ದ ಬಾಲಕನ ಮೇಲೆ ತೆಂಗಿನ ಮರವೊಂದು ಮುರಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಬಂದ್ಯೊಡ್ ಬಳಿಯ ಕಯ್ಯಾರ್ ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಕಾರ್ಯದರ್ಶಿ, ವಾರ್ತಾಭಾರತಿ, ದೈಜಿವರ್ಲ್ಡ್ ಕಾಸರಗೋಡು ಜಿಲ್ಲಾ ವರದಿಗಾರ, ಬಂದ್ಯೊಡ್ ಬಳಿಯ ಕಯ್ಯಾರ್ ನಿವಾಸಿ ಪತ್ರಕರ್ತ ಸ್ಟೀಫನ್ ಕ್ರಾಸ್ತಾ ಅವರ ಪುತ್ರ ಸೋನು  ಕ್ರಾಸ್ತಾ (13) ಮೃತ ಬಾಲಕ.

ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸೋನು ಕ್ರಾಸ್ತಾ ಮನೆ ಬಳಿಯ ತೋಟದಲ್ಲಿದ್ದ ವೇಳೆ ಸುಂಟರ ಗಾಳಿಗೆ ತೆಂಗಿನ ಮರವೊಂದು ಮುರಿದು ಮೈ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News