ರೈಲು ಢಿಕ್ಕಿ: ಮೀನುಗಾರ ಮೃತ್ಯು
Update: 2022-08-08 15:26 GMT
ಮಣಿಪಾಲ, ಆ.8: ರೈಲು ಢಿಕ್ಕಿ ಹೊಡೆದ ಪರಿಣಾಮ ಮೀನುಗಾರರೊಬ್ಬರು ಮೃತಪಟ್ಟ ಘಟನೆ ಆ.8ರಂದು ಬೆಳಗ್ಗೆ ಇಂದ್ರಾಳಿ ಬಳಿ ನಡೆದಿದೆ.
ಮೃತರನ್ನು ಕೆಂಜೂರು ನಿವಾಸಿ ಸುರೇಶ್ (43) ಎಂದು ಗುರುತಿಸಲಾಗಿದೆ. ಇವರು ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಆ.4ರಂದು ಇವರು ಮನೆಯಿಂದ ಕೆಲಸಕ್ಕೆ ಹೋಗಿದ್ದರು. ಆದರೆ ನಂತರ ಮನೆಗೆ ಹೋಗದ ಸುರೇಶ್, ಯಾವುದೋ ಕಾರಣಕ್ಕೆ ಯಾವುದೋ ಕಾರಣಕ್ಕೆ ಇಂದ್ರಾಳಿಗೆ ಹೋಗಿ ದ್ದರೆನ್ನಲಾಗಿದೆ.
ಈ ವೇಳೆ ಮಂಗಳೂರು-ಕುಂದಾಪುರ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಾರ್ಕೂರು ಕಡೆಗೆ ಬರುತ್ತಿರುವಾಗ ರೈಲು ಡಿಕ್ಕಿಯಾಗಿತ್ತೆಂದು ತಿಳಿದುಬಂದಿದೆ. ಇದರಿಂದ ತೀವ್ರವಾಗಿ ಗಾಯಗೊಂಡು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.