ನೀಲೇಶ್ವರ | ಭಾರೀ ಮೌಲ್ಯದ ಬ್ರೌನ್ ಶುಗರ್ ಸಹಿತ ಮೂವರು ಆರೋಪಿಗಳ ಬಂಧನ

Update: 2022-08-09 09:36 GMT

ಕಾಸರಗೋಡು, ಆ.9: ಕಾಸರಗೋಡಿನಿಂದ ಮಲಪ್ಪುರಂಗೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದರೆನ್ನಲಾದ ಭಾರೀ ಮೌಲ್ಯದ ಬ್ರೌನ್ ಶುಗರ್(Brown sugar) ಸಹಿತ ಮೂವರನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಮಲಪ್ಪುರಂ ಕೊಂಡೊಟ್ಟಿ ನಿವಾಸಿ ಮುಹಮ್ಮದ್ ಅಜ್ಮಲ್(26), ಅರಿಕ್ಕೋಡ್ ನಿವಾಸಿ ಎನ್. ಅನ್ಸಿಲ್ (22) ಮತ್ತು  ಮುಹಮ್ಮದ್ ಫೈಝಾಸ್ (22) ಬಂಧಿತ ಆರೋಪಿಗಳಾಗಿದ್ದಾರೆ. ಕಾರಿನಿಂದ 30 ಗ್ರಾಂ ಬ್ರೌನ್ ಶುಗರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆ ಪ್ರಕರಣ: ಉತ್ತರಪ್ರದೇಶ ಬಿಜೆಪಿ ಮುಖಂಡ ಶ್ರೀಕಾಂತ್‌ ತ್ಯಾಗಿ ಬಂಧನ

ನೀಲೇಶ್ವರ ಪಳ್ಳಿಕೆರೆ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ಪರಿಶೋಧಿಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News