ಕುವೈತ್:‌ ಕೆ.ಕೆ.ಎಮ್.ಎ. ಮ್ಯಾಗ್ನೆಟ್ ತಂಡದಿಂದ ಮತ್ತೊಂದು ಮಾನವೀಯ ಸೇವೆ

Update: 2022-08-11 17:30 GMT

ಕುವೈತ್: ಪರ್ವಾನಿಯಾದ ಶವಾಗಾರದಲ್ಲಿ ಹಲವು ದಿನಗಳಿಂದ ಅನಾಥವಾಗಿದ್ದ ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ನಿವಾಸಿಯ ಮೃತದೇಹವನ್ನು ತಾಯ್ನಾಡಿಗೆ ಸಾಗಿಸಲು ಕೆ.ಕೆ.ಎಂ.ಎ. ಮ್ಯಾಗ್ನೆಟ್ ಟೀಂ ಸಹಕರಿಸಿದೆ.

ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರ ನಿವಾಸಿ ನಂದ ಲಾಲ್ (44) ಎಂಬವರ ಮೃತದೇಹ ಶವಾಗಾರದಲ್ಲಿ ಇರುವ ಬಗ್ಗೆ ಜು. 20ರಂದು ಕೆ.ಕೆ.ಎಮ್‌ಎ ಸಂಘಟನೆಯ ಮ್ಯಾಗ್ನೆಟ್ ತಂಡದ ಸದಸ್ಯರ ಗಮನಕ್ಕೆ ಬಂದಿದ್ದು, ತಕ್ಷಣ ಮೃತರ ಕುಟುಂಬದ ಸದಸ್ಯರುಗಳನ್ನು ಸಂಪರ್ಕಿಸಿ, ಕುವೈತ್ ಸರ್ಕಾರಕ್ಕೆ ಬೇಕಾಗಿರುವ ಎಲ್ಲಾ ದಾಖಲೆ  ಪತ್ರಗಳನ್ನು  ಸರಿ ಪಡಿಸಿ,  ಎಲ್ಲಾ ಪ್ರಕ್ರಿಯೆಗಳನ್ನು ಕೊನೆಗೊಳಿಸಿ ಭಾರತೀಯ ದೂತಾವಾಸದ ಸಹಾಯದಿಂದ ಮೃತದೇಹವನ್ನು ಜು.30ರಂದು ರಾತ್ರಿ ಜಝೀರಾ ಏರ್ವೇಸ್ ನಿಂದ ತಾಯ್ನಾಡಿಗೆ ರವಾನಿಸಲಾಯಿತು ಎಂದು ಕೆ.ಕೆ.ಎಂ.ಎ. ಮ್ಯಾಗ್ನೆಟ್ ಟೀಂ ಪ್ರಕಟನೆಯಲ್ಲಿ ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News