ದಿಲ್ಲಿ ಬಳಿಯಿಂದ ಅಪಹರಿಸಲ್ಪಟ್ಟಿದ್ದ ಜೆಡಿಯು ನಾಯಕನ ಪುತ್ರನ ರಕ್ಷಣೆ
Update: 2022-08-22 17:32 GMT
ನೊಯ್ಡ,ಆ.22: ದಿಲ್ಲಿ ಸಮೀಪದ ನೊಯ್ಡದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಅಪಹರಿಸಲ್ಪಟ್ಟಿದ್ದ ಜೆಡಿಯು ನಾಯಕ,ಬಂಕಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ದಿಲಾವರ್ ಖಾನ್ ಅವರ ಪುತ್ರ ಮೆಹ್ರಾಜ್ ಖಾನ್ (24)ರನ್ನು ಪೊಲೀಸರು ರಕ್ಷಿಸಿದ್ದಾರೆ.
ದಿಲ್ಲಿಗೆ ಮೊದಲ ಬಾರಿ ತೆರಳುತ್ತಿದ್ದ ಮೆಹ್ರಾಜ್ರ ನ್ನು ಗ್ರೇಟರ್ ನೊಯ್ಡಾದ ಪರಿ ಚೌಕ್ನಿಂದ ಅಪಹರಿಸಲಾಗಿತ್ತು.
ಮೆಹ್ರಾಜ್ ಬಿಡುಗಡೆಗಾಗಿ ಐದು ಲ.ರೂ.ಗೆ ಬೇಡಿಕೆಯಿಟ್ಟಿದ್ದ ಅಪಹರಣಕಾರರೊಂದಿಗೆ ಗುಂಡಿನ ಕಾಳಗದ ಬಳಿಕ ರಶೀದ್ ಮತ್ತು ಬಷೀರ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಗುಂಡು ಹಾರಿಸಲು ಬಳಸಿದ್ದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ಅವರ ಪೈಕಿ ಓರ್ವನ ಕಾಲಿಗೆ ಗುಂಡು ತಗುಲಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಇತರ ಮೂವರು ಶಂಕಿತರಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು,ಮೆಹ್ರಾಜ್ ಸುರಕ್ಷಿತರಾಗಿದ್ದಾರೆ ಎಂದರು.