ಕಾಸರಗೋಡು; ಹಿರಿಯ ಪತ್ರಕರ್ತ ಉಣ್ಣಿ ಕೃಷ್ಣನ್ ನಿಧನ

Update: 2022-09-07 03:03 GMT

ಕಾಸರಗೋಡು : ಹಿರಿಯ ಪತ್ರಕರ್ತ, ಕಾಸರಗೋಡು ಪ್ರೆಸ್ ಕ್ಲಬ್ ಮಾಜಿ ಕಾರ್ಯದರ್ಶಿ  ಉಣ್ಣಿ ಕೃಷ್ಣನ್ ಪುಷ್ಪಗಿರಿ (64)  ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಕೆಲ ದಿನ ಗಳಿಂದ ಹೃದಯ ಸಂಬಂಧಿ ಕಾಯಿಲೆ ಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೀನಿಯರ್ ಜರ್ನಲಿಸ್ಟ್ ಫೋರಂ ನ ಕಾಸರಗೋಡು ಜಿಲ್ಲಾ ಕೋಶಾಧಿಕಾರಿಯಾಗಿದ್ದರು. ಪಿ ಟಿ ಐ ಕಾಸರಗೋಡು ಜಿಲ್ಲಾ ವರದಿಗಾರ, ಉತ್ತರದೇಶಂ ಮಲಯಾಳ ದೈನಿಕದ  ಉಪ ಸಂಪಾದಕರಗಿಯೂ ಸೇವೆ ಸಲ್ಲಿಸಿದ್ದರು. ಹಲವು ನಾಟಕ ಗಳನ್ನು ಬರೆದಿದ್ದಾರೆ. ಹಲವು ಮಾಧ್ಯಮ ಪ್ರಶಸ್ತಿಗಳು ಲಭಿಸಿವೆ. ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲೂ ಸಕ್ರಿಯ ರಾಗಿದ್ದರು.

ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News