ಕಾಂಗ್ರೆಸ್ ಮುಗಿದುಹೋಗಿದೆ, ಆ ಪಕ್ಷದ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದ ಅರವಿಂದ ಕೇಜ್ರಿವಾಲ್

Update: 2022-09-13 08:15 GMT

ಅಹಮದಾಬಾದ್: ಆಮ್ ಆದ್ಮಿ ಪಕ್ಷವು ಪಂಜಾಬ್  ಹಾಗೂ ದಿಲ್ಲಿ ಸರಕಾರದ ಕೋಟ್ಯಂತರ ರೂಪಾಯಿ ಹಣವನ್ನು  ಗುಜರಾತ್ ನಲ್ಲಿ ಜಾಹೀರಾತಿಗಾಗಿ ಹೂಡಿಕೆ ಮಾಡುತ್ತಿದೆ ಎಂದು ಕಾಂಗ್ರೆಸ್  ನಾಯಕ ಅಜಯ್ ಕುಮಾರ್ ಆರೋಪದ ಕುರಿತು ಪತ್ರಕರ್ತರೊಬ್ಬರು ಇಂದು ಕೇಳಿದ ಪ್ರಶ್ನೆಗೆ    ಪ್ರತಿಕ್ರಿಯಿಸಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು(Arvind Kejriwal )  "ಕಾಂಗ್ರೆಸ್  ಮುಗಿದುಹೋಗಿದೆ ಆ ಪಕ್ಷದವರ ಪ್ರಶ್ನೆಯನ್ನು ಕೇಳುವುದನ್ನು ನಿಲ್ಲಿಸಿ. ಅವರ ಬಗ್ಗೆ ಚಿಂತೆ ಮಾಡಬೇಡಿ. ಜನತೆ ನಮ್ಮೊಂದಿದ್ದಾರೆ. ಜನತೆಯ ಮನಸ್ಸಲ್ಲಿ ಏನಾದರೂ ಪ್ರಶ್ನೆ ಇದೆಯೇ. ಅವರಲ್ಲಿ ಏನೂ ಪ್ರಶ್ನೆ ಇಲ್ಲ. ಎಲ್ಲರೂ ಖುಷಿಯಾಗಿದ್ದಾರೆ" ಎಂದು ಹೇಳಿದ್ದಾರೆ.

ಗುಜರಾತ್‌ನಲ್ಲಿ ಎರಡು ದಿನಗಳ ಪ್ರಚಾರದಲ್ಲಿರುವ ಕೇಜ್ರಿವಾಲ್ ಟೌನ್ ಹಾಲ್ ನಲ್ಲಿ  , ನೈರ್ಮಲ್ಯ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಆಡಳಿತಾರೂಢ ಬಿಜೆಪಿಯು "ಸೋನಿಯಾ ಗಾಂಧಿಯನ್ನು ಹಿಂಬಾಗಿಲ ಮೂಲಕ ಪ್ರಧಾನಿ ಮಾಡಲು ಪ್ರಯತ್ನಿಸುತ್ತಿದೆ" ಎಂದು ಕೇಜ್ರಿವಾಲ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News