ಉಡುಪಿ: ತ್ಯಾಜ್ಯ ಸಂಗ್ರಹ ವಾಹನ ಚಲಾಯಿಸಿ ತ್ಯಾಜ್ಯ ಸಂಗ್ರಹಿಸಿದ ಜಿಪಂ ಸಿಇಒ

Update: 2022-09-24 10:36 GMT

ಉಡುಪಿ, ಸೆ.24: ಬಡಗಬೆಟ್ಟು ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ‌ ನೀಡಿದ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್., ತಾವೇ ಸ್ವತಃ ತಾಜ್ಯ‌ ನಿರ್ವಹಣೆ ವಾಹನ‌ ಚಲಾಯಿಸಿ ನಾಗರಿಕರಿಂದ ಕಸ ಸಂಗ್ರಹಿಸಿದರು.

ಇಂದು  ಬೆಳಗ್ಗೆ ಉಡುಪಿ ಜಿಲ್ಲಾ‌ ಪಂಚಾಯತ್ ನ‌ ಮುಖ್ಯ‌ಕಾರ್ಯನಿರ್ವಹಣಾಧಿಕಾರಿ ಇವರು ಬಡಗಬೆಟ್ಟು ಗ್ರಾಮ‌ ಪಂಚಾಯತ್ ನ ತ್ಯಾಜ್ಯ‌ ನಿರ್ವಹಣಾ  ವಾಹನವನ್ನು ಚಾಲನೆ‌‌ ಮಾಡಿ ಮನೆ ಮನೆಯಿಂದ ತ್ಯಾಜ್ಯ‌ ಸಂಗ್ರಹಣೆಯಲ್ಲಿ ಭಾಗಿಯಾಗಿ ಎಲ್ಲರ ಅಚ್ಚರಿಗೆ ಕಾರಣರಾದರು,

IAS ಅಧಿಕಾರಿಯೊಬ್ಬರ ಈ ನಡೆ ಜಿಲ್ಲೆಯ ತ್ಯಾಜ್ಯ ನಿರ್ವಹಣಾ  ಕಾರ್ಯಕರ್ತರಿಗೆ ಸ್ಫೂರ್ತಿ ತಂದಿದೆ.

ಈ ಸಂದರ್ಭದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಜಿಪಂ‌ ಮುಖ್ಯ ಯೋಜನಾಧಿಕಾರಿಗಳು, ಇತರ‌ ಪ್ರಮುಖರು‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News