ಕಾರ್ಕಳ: ದೇವಸ್ಥಾನ, ಗರಡಿ, ಮನೆಗಳಿಗೆ ಹಬ್ಬಕ್ಕೆ ಭತ್ತದ ತೆನೆ ಒದಗಿಸಿ ಸೌಹಾರ್ದತೆ ಸಾರುವ ಲೋರೆನ್ಸ್ ವಾಝ್

Update: 2022-10-01 10:03 GMT

ಕಾರ್ಕಳ: ವರ್ಷಗಳು ಕಳೆದಂತೆ ಬೇಸಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ನವರಾತ್ರಿ ಸಂದರ್ಭದಲ್ಲಿ ಕೊರಳ ಹಬ್ಬ (ತೆನೆ ಹಬ್ಬ)ದ ಆಚರಣೆಗೂ ತೊಡಕಾಗುತ್ತಿದೆ. ಈ ನಡುವೆ ಕೃಷಿಕ ಲೋರೆನ್ಸ್ ವಾಝ್ ತಮ್ಮ ಗದ್ದೆಯಲ್ಲಿ ಬೆಳೆದ ಕೊರಳನ್ನು ಹಬ್ಬಕ್ಕೆ  ದೇವಸ್ಥಾನ, ಗರಡಿ, ಮನೆಗಳಿಗೆ ನೀಡಿ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.

ಹಿಂದೆಲ್ಲಾ ತಮ್ಮ ಮನೆಗಳಿಂದ ಅಥವಾ ಅಕ್ಕಪಕ್ಕದ ಮನೆಯವರ ಗದ್ದೆಯಿಂದ ಕೊರಳು ತಂದು ಹಬ್ಬವನ್ನು ಆಚರಿಸುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ಬೇಸಾಯ ಮಾಡುವವರ ಸಂಖ್ಯೆಯೇ ಕಡಿಮೆಯಾಗುತ್ತಿರುವ ಕಾರಣ ಮತ್ತು ಈ ವರ್ಷ ಹಬ್ಬ ಬೇಗ ಬಂದ ಕಾರಣ ಕೊರಳು ಸಿಗುವುದು ಕಷ್ಟವಾಗಿದೆ. ಇಂತಹ ಸಂದರ್ದಭಲ್ಲಿ ಕಾರ್ಕಳ ಸಾಣೂರಿನ ಲೋರೆನ್ಸ್ ವಾಝ್ ಅವರು ತಮ್ಮ ಗದ್ದೆಯಲ್ಲಿ ಬೆಳೆದ ಕೊರಳನ್ನು ಹಬ್ಬದ ಸಮಯ ದೇವಸ್ಥಾನ, ಗರಡಿ, ಮನೆಗಳಿಗೆ ನೀಡಿ ಮಾದರಿಯಾಗಿದ್ದಾರೆ.

''ಕೆಲವು ವರ್ಷಗಳಿ೦ದ ನಾನು ಕೊರಳನ್ನು ನೀಡುತ್ತಾ ಬಂದಿದ್ದೇನೆ ಆದರೆ ಈ ವರ್ಷ ಅತೀ ಹೆಚ್ಚು ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ವೇಣುಗೋಪಾಲ ದೇವಸ್ಥಾನ ಹೀಗೆ ಸುಮಾರು 8 ದೇವಸ್ಥಾನ 2 ಗರಡಿ ಮತ್ತು 100 ಕ್ಕೂ ಹೆಚ್ಚು ಮನೆಯವರು ಕೊರಳನ್ನು ಪಡೆದುಕೊಂಡು ಹೋಗಿದ್ದಾರೆ ಇದೊಂದು ದೇವರ ಕೆಲಸ ಹಾಗಾಗಿ ಕೊರಳನ್ನು ನೀಡಲು ನನಗೆ ತುಂಬಾ ಖುಷಿ ಮತ್ತು ಹೆಮ್ಮೆಯಾಗುತ್ತದೆ,  ಮುಂದೆಯೂ ನೀಡುತ್ತೇನೆ''

- ಲೋರೆನ್ಸ್ ವಾಝ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News