ರಸ್ತೆ ನಾಮಕರಣ: ಆಕ್ಷೇಪಣೆಗೆ ಆಹ್ವಾನ
Update: 2022-10-03 15:00 GMT
ಉಡುಪಿ, ಅ.3: ಉಡುಪಿ ನಗರಸಭಾ ವ್ಯಾಪ್ತಿಯ ಉಡುಪಿ ಸಂಸ್ಕೃತ ಕಾಲೇಜು ಬಳಿಯ ವೃತ್ತಕ್ಕೆ ಶ್ರೀನಿವಾಸ ಉಪಾಧ್ಯ ಪಣಿಯಾಡಿ ವೃತ್ತ ಎಂದು ನಾಮಕರಣ ಗೊಳಿಸುವ ಬಗ್ಗೆ, ಯಾವುದೇ ಆಕ್ಷೇಪಣೆ ಸಲಹೆಗಳು ಇದ್ದಲ್ಲಿ 30 ದಿವಸಗಳ ಒಳಗೆ ಉಡುಪಿ ನಗರಸಭೆ ಕಛೇರಿಗೆ ಸಲ್ಲಿಸುವಂತೆ ಹಾಗೂ ನಂತರ ಬರುವ ಆಕ್ಷೇಪಣೆ-ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.