ಕೋಟ: ಅಮಾನತಿನಲ್ಲಿದ್ದ ಕೋರ್ಟ್ ಅಟೆಂಡರ್ ಆತ್ಮಹತ್ಯೆ

Update: 2022-10-08 15:45 GMT

ಕೋಟ, ಅ.8: ಅಮಾನತಿನಲ್ಲಿದ್ದ ನ್ಯಾಯಾಲಯದ ಅಟೆಂಡರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮೊಳಹಳ್ಳಿ ಯಡಾಳಬೆಟ್ಟು ಎಂಬಲ್ಲಿ ಶುಕ್ರವಾರ ನಡೆದಿದೆ.

ಮೃತರನ್ನು ಯಡಾಳಬೆಟ್ಟುವಿನ ನವೀನ ಶೆಟ್ಟಿ(32) ಎಂದು ಗುರುತಿಸಲಾಗಿದೆ. 

ನ್ಯಾಯಾಲಯದಲ್ಲಿ ಸುಮಾರು 7 ವರ್ಷಗಳಿಂದ ಅಟೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದು ಸುಮಾರು ಒಂದೂವರೆ ವರ್ಷಗಳಿಂದ ಅಮಾನತಿನಲ್ಲಿದ್ದರು. ಇದೇ ವಿಚಾರದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು, ಮನೆಯ ತೋಟದ ಕೆರೆಗೆ ಆಕಸ್ಮಿಕ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೋ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News