ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ; ವಾರದೊಳಗೆ ಸಭೆ: ಸಚಿವ ಅಂಗಾರ ಭರವಸೆ

Update: 2022-11-06 15:02 GMT

ಉಡುಪಿ : ಒಂದು ವಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ನಿರಂತರ ಸಿಗುವ ಬಗ್ಗೆ  ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆಯಲಾಗುವುದು ಎಂದು ಮೀನುಗಾರಿಕಾ ಸಚಿವ ಎಸ್.ಅಂಗಾರ ಭರವಸೆ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನ.5ರಂದು ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾಧಿಕಾರಿ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮೀನುಗಾರಿಕಾ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ನಾಡದೋಣಿ ಮೀನುಗಾರರ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಸಚಿವರ ಈ ಭರವಸೆಯ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರರ ಒಕ್ಕೂಟ ನ.೭ರಂದು ನಡೆಸಲು ಉದ್ದೇಶಿಸಿದ್ದ ನಾಡದೋಣಿ ಮೀನುಗಾರರ ಹಕ್ಕೊತ್ತಾಯ ಆಂದೋಲನವನ್ನು ಕೈಬಿಡಲು ಇದೇ ಸಭೆಯಲ್ಲಿ ನಿರ್ಧರಿಸ ಲಾಯಿತು.

ಸಭೆಯಲ್ಲಿ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಗೌರವ ಸಲಹೆಗಾರ ಚಂದ್ರಕಾಂತ ಕರ್ಕೇರ, ಪ್ರಧಾನ ಕಾರ್ಯದರ್ಶಿ ಗೋಪಾಲ ಆರ್.ಕೆ., ಸಂಘಟನಾ ಕಾರ್ಯದರ್ಶಿ ವಿಕ್ರಂ ಸಾಲಿಯಾನ್ ಮಲ್ಪೆ, ಯಶವಂತ್ ಖಾರ್ವಿ ಗಂಗೊಳ್ಳಿ, ಅಶ್ವತ್ಥ್ ಮಂಗಳೂರು, ಉಪಾಧ್ಯಕ್ಷ ವಿಜಯ ಬಂಗೇರ ಹೆಜಮಾಡಿ, ಸತೀಶ್ ಕುಂದರ್ ಮಲ್ಪೆ, ಚಂದ್ರಶೇಖರ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

Similar News