ಉದ್ಯಾವರದ ಯುವಕ ಹೈದರಬಾದಿನಲ್ಲಿ ನಾಪತ್ತೆ

Update: 2022-11-15 15:14 GMT

ಕಾಪು: ಹೈದರಬಾದಿಗೆ ಕೆಲಸಕ್ಕೆಂದು ಹೋದ ಯುವಕನೋರ್ವ  ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿ ರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಾವರ ಪಿತ್ರೋಡಿ ನಿವಾಸಿ ಸುಜಿತ್ (26) ಎಂಬವರು ಎ.29ರಂದು ಬೆಳಗ್ಗೆ ಕೆಲಸಕ್ಕೆಂದು ಹೈದರಾಬಾದ್‌ ನಲ್ಲಿರುವ ಕರೀಮ್ ನಗರಕ್ಕೆ ಹೋಗಿದ್ದು ಕೆಲಸಕ್ಕೆ ಹೋದ 4 ತಿಂಗಳವರೆಗೆ ಮೊಬೈಲ್ ಕರೆ ಮಾಡಿ ಮಾತಾನಾಡುತ್ತಿದ್ದು ಕೆಲಸಕ್ಕೆ ಹೋದ ನಂತರ ಮನೆಗೆ ಬಂದಿರುವುದಿಲ್ಲ. ಇತ್ತೀಚೆಗೆ 2 ತಿಂಗಳಿನಿಂದ ಮನೆಯವರಿಗೆ ಯಾವುದೇ ಪೋನ್ ಕರೆ ಮಾಡಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. 

Similar News