ನ.22 ಮತ್ತು 23ರಂದು ಜಾಮಿಅ ಸಅದಿಯ್ಯ ಸನದುದಾನ ಸಮ್ಮೇಳನ

Update: 2022-11-18 17:12 GMT

ಮಂಗಳೂರು, ನ.18: ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ ಶರೀಅತ್ ಕಾಲೇಜು ಹಾಗೂ ಹಿಫುಲ್ ಕುರ್‌ಆನ್ ಮತ್ತು ಸ್ನಾತಕೋತ್ತರ ಪದವಿಧರರಿಗಾಗಿ ಸನದುದಾನ ಸಮ್ಮೇಳನ ಮತ್ತು ತಾಜುಲ್ ಉಲಮಾ ನುರುಲ್ ಉಲಮಾ ಆಂಡ್ ನೇರ್ಚೆ ನ.22 ಮತ್ತು 23ರಂದು ಸಅದಿಯ್ಯದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಮಜ್ಲಿಸುಲ್ ಉಲಮಾಉ-ಸ್ಸದಿಯ್ಯೀನ್ ಕರ್ನಾಟಕ ಉಪಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಮಾಹಿತಿ ನೀಡಿದರು.

ನ.22ರಂದು ಬೆಳಗ್ಗೆ 7ಗಂಟೆಗೆ ಎಟ್ಟಿಕ್ಕುಳಂನಲ್ಲಿರುವ ತಾಜುಲ್ ಉಲಮಾ ಮಖ್ಖರ ಝಿಯಾರತ್‌ನೊಂದಿಗೆ ಚಾಲನೆಯಾಗಲಿದೆ. 1.30ಕ್ಕೆ ಮರ್ಹೂಮ್ ಸಈದ್ ಮುಸ್ಲಿಯಾರ್ ಕೆ.ವಿ. ಉಸ್ತಾದ್, ಅಬ್ದುಲ್ ಖಾದರ್ ಮುಸ್ಲಿಯಾರ್ ಮೇಲ್ಪರಂಬ್ ಮತ್ತು 3 ಗಂಟೆಗೆ ನೂರುಲ್ ಉಲಮಾ ಎಂ.ಎ. ಉಸ್ತಾದ್ ಹಾಗೂ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿಯವರ ಮಖ್ಖರ ಝಿಯಾರತ್ ನೊಂದಿಗೆ ಸಯ್ಯಿದ್ ಪಿ.ಎಸ್. ಆಟಕೋಯ ತಂಙಳ್ ಪಂಜಿಕಲ್ಲು ನೇತೃತ್ವದಲ್ಲಿ ನಡೆಯಲಿದೆ. 3.30ಕ್ಕೆ ಸಯ್ಯದ್ ಇಸ್ಮಾಯಿಲ್ ಅಲ್ ತಂಳ್ ಪಾನೂರು ನೇತೃತ್ವದಲ್ಲಿ ಖತಮುಲ್ ಕುರ್‌ಆನ್ ನಡೆಯಲಿದೆ. ಸಂಜೆ 4 ಗಂಟೆಗೆ ಸಯ್ಯದ್ ಇಬ್ರಾಹೀಂ ಪೂಕುಞಿ ತಂಳ್ ಕಲ್ಲಕಟ್ಟಿ ಧ್ವಜಾರೋಹಣಗೈಯ್ಯಲಿದ್ದಾರೆ.

4.30ಕ್ಕೆ ಸಾಂಸ್ಕೃತಿಕ ಸಮಾವೇಶ ಉದ್ಘಾಟನೆಯಾಗಲಿದೆ. ಸಅದಿಯ್ಯ ಅಧ್ಯಕ್ಷ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಸಚಿವ ಅಹ್ಮದ್ ದೇವರ್ ಕೋವಿಳ್ ಉದ್ಘಾಟಿಸುವರು. ರಾಜ್ಯ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಅತಿಥಿಯಾಗಿ ಭಾಗವಹಿಸುವರು. ಶಾಸಕರಾದ ಸಿ.ಎಚ್. ಕುಞಂಬು, ಎನ್.ಎ. ನೆಲ್ಲಿಕುನ್ನು, ಇ. ಚಂದ್ರಶೇಖರನ್,  ಎಕೆಎಂ ಅಶ್ರಫ್ ಹಾಗೂ ರಾಜಗೋಪಾಲ್ ಭಾಗವಹಿಸುವರು.  ಮಗ್ರಿಬ್ ನಂತರ ಮುಹ್ಯಿದ್ದೀನ್  ರಾತೀಬ್‌ಗೆ  ಮುಹಮ್ಮದ್ ಸ್ವಾಲಿಹ್ ಸಅದಿ ನೇತೃತ್ವ ನೀಡಲಿದ್ದಾರೆ. ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು ಉದ್ಬೋಧನೆ ನಡೆಸಲಿದ್ದಾರೆ. ಬಳಿಕ ಬುರ್ದಾ ಮಜ್ಲಿಸ್ ನಡೆಯಲಿದೆ.

23ರಂದು ಬೆಳಗ್ಗೆ 6.30ಕ್ಕೆ ತಾಜುಲ್ ಉಲಮಾ ನೂರುಲ್ ಉಲಮಾ ಮೌಲಿದ್ ನಡೆಯಲಿದ್ದು, ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. 9ಗಂಟೆಗೆ ಆಲುಂನಿ ಮೀಟರ್ ನಡೆಯಲಿದೆ. 10ಗಂಟೆಗೆ ಬೃಹತ್ ಸಅದೀ ಸಂಗಮ ನಡೆಯಲಿದ್ದು, ಕೇಂದ್ರ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ಅಲ್‌ಬುಖಾರಿಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ ಕೆ.ಕೆ. ಹುಸೇನ್ ಬಾಖವಿ ಮುಖ್ಯ ಪ್ರಭಾಷಣ ಮಾಡುವರು.

12ಗಂಟೆಗೆ ಪದವಿದಾರರಿಗೆ ವಸ್ತ್ರದಾನ ನಡೆಯಲಿದ್ದು, ಸಯ್ಯಿದ್ ಜಾಫರ್ ಸಾದಿಖ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ಗಲ್ಫ್ ಮೀಟ್ ನಡೆಯಲಿದೆ. ನಾನಾ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು. ಸಂಜೆ 5ಗಂಟೆಗೆ ಸನದುದಾನ ಸಮಾರಂಭ ನಡೆಯಲಿದ್ದು, ಸಅದಿಯ್ಯ ಅಧ್ಯಕ್ಷ ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹೀಂ ಖಲೀಲ್‌ಬುಖಾರಿ ತಂಙಳ್ ಕಡಲುಂಡಿ ಉದ್ಘಾಟನೆ ನೆರವೇರಿಸಲಿದ್ದಾರೆ.

ಸಯ್ಯದ್ ಅಲೀ ಬಾಫಕೀಹ್ ತಂಙಳ್ ದುವಾ ನೆರವೇರಿಸುವರು. ಸಮಸ್ತ ಅಧ್ಯಕ್ಷರಾದ ರೀಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಸನದುದಾನ ಮಾಡುವರು. ಅಬ್ದುಲ್ ರಹಿಮಾನ್ ಸಖಾಫಿ ಪೇರೋಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ  ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಜ್ಲಿಸುಲ್ ಉಲಮಾಉ-ಇ-ಸ್ಸದಿಯ್ಯೀನ್ ಕೇಂದ್ರ ಸಮಿತಿ ಕೋಶಾಧಿಕಾರಿ ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು, ಮಜ್ಲಿಸುಲ್ ಉಲಮಾಉ-ಇ-ಸ್ಸದಿಯ್ಯೀನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಇಸ್ಮಾಯಿಲ್ ಸಅದಿ, ಜಾಮಿಯಾ ಸಅದಿಯಾ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಕತರ್, ಜಾಮಿಯಾ ಸಅದಿಯಾ ಸಿಟಿ ಸಮಿತಿ ಅಧ್ಯಕ್ಷ ಆಲ್ ಹಾಜ್ ಮೊಯ್ದಿನ್ ಅಲ್‌ ಸಫರ್ ಮುಕ್ಕ ಉಪಸ್ಥಿತರಿದ್ದರು.

Similar News