ಕೆನಡ: ಭಾರತೀಯ ಮೂಲದ ಯುವಕನ ಇರಿದು ಹತ್ಯೆ

Update: 2022-11-24 17:44 GMT

ಟೊರಂಟೊ, ನ.24: ಕೆನಡಾದ ಬ್ರಿಟಿಷ್ ಕೊಲಂಬಿಯಾ(Tish Columbia) ಪ್ರಾಂತದ ಹೈಸ್ಕೂಲ್‍ನ ಪಾರ್ಕಿಂಗ್ ಪ್ರದೇಶದಲ್ಲಿ 18 ವರ್ಷದ ಭಾರತೀಯ ಮೂಲದ ಯುವಕನನ್ನು ಮತ್ತೊಬ್ಬ ಯುವಕ ಇರಿದು ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸರ್ರೆ ನಗರದ ತಮನವಿಸ್ ಮಾಧ್ಯಮಿಕ ಶಾಲೆ(Tamanavis Secondary School)ಯ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳವಾರ ಇಬ್ಬರು ಯುವಕರ ಮಧ್ಯೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು 17 ವರ್ಷದ ಯುವಕ ಚೂರಿಯಿಂದ ಇರಿದಾಗ ಮೆಹಕ್‍ಪ್ರೀತ್ ಸೇಥಿ (Mehkpreet Sethi)ಎಂಬಾತ ತೀವ್ರ ಗಾಯಗೊಂಡಿದ್ದಾನೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸರ್ರೆ ಪೊಲೀಸ್ ವಕ್ತಾರ ವನೆಸಾ ಮನ್‍ರನ್ನು ಉಲ್ಲೇಖಿಸಿ `ದಿ ವ್ಯಾಂಕೋವರ್ ಸನ್'(The Vancouver Sun) ಪತ್ರಿಕೆ ವರದಿ ಮಾಡಿದೆ. 

ಶಾಲೆಯ ಪಾರ್ಕಿಂಗ್ ಏರಿಯಾದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ಯುವಕ ಶಾಲಾ ವಿದ್ಯಾರ್ಥಿಯಲ್ಲ ಎಂದು ಶಾಲೆಯ ಪ್ರಾಂಶುಪಾಲರು ದೃಢಪಡಿಸಿದ್ದಾರೆ.  ಆರೋಪಿ ಹಾಗೂ ಮೃತಯುವಕ ಮೊದಲಿಂದಲೂ ಪರಿಚಿತರಾಗಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿರುವುದಾಗಿ ಸಂಯೋಜಿತ ನರಹತ್ಯೆ ತನಿಖಾ ತಂಡದ ಅಧಿಕಾರಿಗಳು ಹೇಳಿದ್ದಾರೆ.

Similar News