ಉತ್ತರಾಖಂಡ: 13ರ ಹರೆಯದ ಬಾಲಕನನ್ನು ಕೊಂದ ಚಿರತೆ

Update: 2022-11-28 14:14 GMT

ನ್ಯೂ ತೆಹ್ರಿ,ನ.28: ಉತ್ತರಾಖಂಡದ ತೆಹ್ರಿ (Tehri)ಜಿಲ್ಲೆಯಲ್ಲಿ 13ರ ಹರೆಯದ ಬಾಲಕನೋರ್ವನನ್ನು ಚಿರತೆ ಕೊಂದುಹಾಕಿದೆ.

ರವಿವಾರ ಸಂಜೆ ಆರು ಗಂಟೆಯ ಸುಮಾರಿಗೆ ಘನಸಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅರಣ್ಯಾಧಿಕಾರಿ ಪ್ರದೀಪ್ ಚೌಹಾಣ್ (Pradeep Chauhan)ತಿಳಿಸಿದರು.

ಅರ್ನವ್ ಚಂದ್ (Arnav Chand)ತನ್ನ ಗೆಳೆಯರೊಂದಿಗೆ ಆಟವಾಡಿ ಮನೆಗೆ ಮರಳುತ್ತಿದ್ದಾಗ ಆತನ ಮೇಲೆ ದಾಳಿ ನಡೆಸಿದ ಚಿರತೆ ಸಮೀಪದ ಅರಣ್ಯಕ್ಕೆ ಎಳೆದೊಯ್ದಿತ್ತು. ಬಾಲಕ ಬರುತ್ತಿದ್ದ ದಾರಿಯ ಎರಡೂ ಕಡೆಗಳಲ್ಲಿ ದಟ್ಟವಾದ ಪೊದೆಗಳಿದ್ದು,ಚಿರತೆ ಅವುಗಳ ಹಿಂದೆ ಅಡಗಿದ್ದಿರಬಹುದು ಎಂದರು.

ಗ್ರಾಮಸ್ಥರೊಂದಿಗೆ ಶೋಧ ಕಾರ್ಯ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸೋಮವಾರ ಮಧ್ಯಾಹ್ನ ಮನೆಯಿಂದ ಸುಮಾರು ಒಂದು ಕಿ.ಮೀ.ದೂರದ ಅರಣ್ಯದಲ್ಲಿ ಬಾಲಕನ ಶವವನ್ನು ಪತ್ತೆ ಹಚ್ಚಿದ್ದಾರೆ.

Similar News