ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: ‘ವಾಲಿವಧೆ’ ನಾಟಕ ಪ್ರಥಮ

Update: 2022-12-05 14:55 GMT

ಉಡುಪಿ, ಡಿ.5: ಉಡುಪಿ ರಂಗಭೂಮಿ ವತಿಯಿಂದ ಹಮ್ಮಿಕೊಳ್ಳಲಾದ 43ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಹಾವೇರಿ ಶೇಷಗಿರಿ ಗಜಾನನ ಯುವಕ ಮಂಡಲ ತಂಡದ ವಾಲಿವಧೆ ನಾಟಕ ಪ್ರಥಮ ಬಹುಮಾನ ಗೆದ್ದುಕೊಂಡು 35,000ರೂ. ನಗದು ಮತ್ತು ಸ್ಮರಣಿಕೆ ಹಾಗೂ ಪರ್ಯಾಯ ಫಲಕವನ್ನು ತನ್ನಾಗಿಸಿಕೊಂಡಿದೆ.

ದ್ವಿತೀಯ ಬಹುಮಾನವನ್ನು ತೀರ್ಥಹಳ್ಳಿಯ ನಟಮಿತ್ರರು ತಂಡದ ತುರುಬ ಕಟ್ಟುವ ಹದನ ನಾಟಕ (25,000ರೂ. ನಗದು ಮತ್ತು ಸ್ಮಾರಕ ಸ್ಮರಣಿಕೆ) ಹಾಗೂ ತೃತೀಯ ಬಹುಮಾನವನ್ನು ಮಂದಾರ ಬೈಕಾಡಿ ತಂಡದ ಕೊಳ್ಳಿ ನಾಟಕ (15,000ರೂ. ಮತ್ತು ಸ್ಮಾರಕ ಸ್ಮರಣಿಕೆ) ಪಡೆದುಕೊಂಡಿದೆ.

ಬಹುಮಾನಗಳ ವಿವರ: ಶ್ರೇಷ್ಠ ನಿರ್ದೇಶಕ: ಪ್ರ-ವಾಲಿವಧೆ ನಾಟಕದ ಗಣೇಶ್ ಮಂದಾರ್ತಿ(10,000ರೂ. ನಗದು ಹಾಗೂ ಪರ್ಯಾಯ ಫಲಕ), ದ್ವಿ- ತುರುಬ ಕಟ್ಟುವ ಹದನ ನಾಟಕದ ಶ್ರೀಕಾಂತ್ ಕುಮುಟಾ (6,000ರೂ. ನಗದು ಮತ್ತು ಸ್ಮರಣಿಕೆ), ತೃ- ಸಂಚಯ ಟ್ರಸ್ಟ್ ಬೆಂಗಳೂರು ತಂಡದ ತದ್ರೂಪಿ ನಾಟಕದ ಜೋಸೆಫ್ ಜಾನ್ (4,000ರೂ. ನಗದು ಮತ್ತು ಸ್ಮರಣಿಕೆ).

ಶ್ರೇಷ್ಠ ನಟ: ಪ್ರ-ವಾಲಿವಧೆ ನಾಟಕದ ವಾಲಿ ಪಾತ್ರಧಾರಿ ದೇವಿ ಪ್ರಸಾದ ವೈ., ದ್ವಿ- ವಾಲಿವಧೆ ನಾಟಕದ ಸುಗ್ರೀವ  ಪಾತ್ರಧಾರಿ ಸಿದ್ದು ಎಸ್.ಕೆ., ತೃ- ತದ್ರೂಪಿ ನಾಟಕದ ಜನರಲ್ ಪೋಪಟ್ ಪಾತ್ರಧಾರಿ ಕೀರ್ತಿಭಾನು ಎಂ.ವಿ. ಶ್ರೇಷ್ಠ ನಟಿ: ಪ್ರ-ಕೊಳ್ಳಿ ನಾಟಕದ ದ್ರೌಪದಿ ಪಾತ್ರಧಾರಿಣಿ ಪ್ರಿಯಾ ಬ್ರಹ್ಮಾವರ, ದ್ವಿ- ಉಡುಪಿ ಸುಮನಸಾ ಕೊಡವೂರು ತಂಡದ ಅರುಂಧತಿ ಆಲಾಪ ನಾಟಕದ ಆರುಂದತಿ ಪಾತ್ರಧಾರಿಣಿ ಪ್ರಜ್ಞಾಶ್ರೀ ಹಾಗೂ ಭೂಮಿಕಾ ಹಾರಾಡಿ ತಂಡದ  ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಾಟಕದ ಶೀಲವತಿ ಪಾತ್ರ ಧಾರಿಣಿ ರಂಜಿತಾ ಶೇಟ್, ತೃ- ಕೊಳ್ಳಿ ನಾಟಕದ ಉಜ್ಜಿ ಪಾತ್ರಧಾರಿಣಿ ಶ್ವೇತಾ ಮಣಿಪಾಲ.

ಶ್ರೇಷ್ಠ ಸಂಗೀತ: ಪ್ರ- ವಾಲಿವಧೆ ನಾಟಕದ ಅನುಷ್ ಶೆಟ್ಟಿ-ಮುನ್ನ-ಗಣೇಶ್, ದ್ವಿ- ತುರುಬ ಕಟ್ಟುವ ಹದನ ನಾಟಕದ ಶ್ರೀಪಾದ್ ತೀರ್ಥಹಳ್ಳಿ, ತೃ- ಕೊಳ್ಳಿ ನಾಟಕದ ವಾಸುದೇವ ಗಂಗೇರ. ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ: ಪ್ರ- ತುರುಬ ಕಟ್ಟುವ ಹದನ ನಾಟಕ, ದ್ವಿ- ವಾಲಿವಧೆ ನಾಟಕ, ತೃ- ಸೂರ್ಯಾ ಸ್ತದಿಂದ ಸೂರ್ಯೋದಯದವರೆಗೆ ನಾಟಕ.

ಶ್ರೇಷ್ಠ ಪ್ರಸಾಧನ: ಪ್ರ- ತುರುಬ ಕಟ್ಟುವ ಹದನ ನಾಟಕದ ನಿರಂಜನ್ ಪವರ್, ದ್ವಿ- ವಾಲಿವಧೆ ನಾಟಕದ ಪೃಥ್ವಿನ್ ಕೆ.ವಾಸು, ತೃ- ಕೊಳ್ಳಿ ನಾಟಕದ ರಮೇಶ್ ಕಪಿಲೇಶ್ವರ. ಶ್ರೇಷ್ಠ ರಂಗ ಬೆಳಕು: ಕೊಳ್ಳಿ ನಾಟಕದ ರಾಜು ಮಣಿಪಾಲ, ದ್ವಿ- ವಾಲಿವಧೆ ನಾಟಕದ ಪೃಥ್ವಿನ್ ಕೆ.ವಾಸು, ತೃ- ತುರುಬ ಕಟ್ಟುವ ಹದನ ನಾಟಕದ ಚಂದನ್ ಶಿವಮೊಗ್ಗ. ಶ್ರೇಷ್ಠ ಹಾಸ್ಯ ನಟನೆ: ಪ್ರ- ತುರುಬ ಕಟ್ಟುವ ಹದನ ನಾಟಕದ ಉತ್ತರ ಕುಮಾರ ಪಾತ್ರಧಾರಿ ನಂದನ್ ಎಂ.ಎಸ್. ಶ್ರೇಷ್ಠ ಬಾಲ ನಟನೆ: ವಾಲಿವಧೆ ನಾಟಕದ ಬಾಲ ಸುಗ್ರೀವ ಪಾತ್ರಧಾರಿ  ಉದಯ್ ಬಿ.

ಮೆಚ್ಚುಗೆ ಬಹುಮಾನಗಳು: ಬಿಂಕ ಬಿನ್ನಾಣರು ರಂಗತಂಡ ಬೆಂಗಳೂರು ತಂಡದ ಸುಯೋಧನ ನಾಟಕದ ಸುಯೋಧನ ಪಾತ್ರಧಾರಿ ಶಿವು ಹೊನ್ನಿಗನ ಹಳ್ಳಿ, ತದ್ರೂಪಿ ನಾಟಕದ ತದ್ರೂಪಿ ಪಾತ್ರಧಾರಿ ಕೃಷ್ಣ ಹೆಬ್ಬಾಲೆ, ಸೂರ್ಯಾ ಸ್ತದಿಂದ ಸೂರ್ಯೋದಯದವರೆಗೆ ನಾಟಕದ ಓಕ್ಕಾಕ ಪಾತ್ರಧಾರಿ ಸುನಿಲ್ ಪಾಂಡೇಶ್ವರ, ತುರುಬ ಕಟ್ಟುವ ಹದನ ನಾಟಕದ ದುರ್ಯೋಧನ ಪಾತ್ರಧಾರಿ ಶರತ್ ಕುಮಾರ್ ಇ.ಜಿ., ರಂಗಪಯಣ ಬೆಂಗಳೂರು ತಂಡದ ಪೂಲನ್ ದೇವಿ ನಾಟಕದ ಪೂಲನ್ ದೇವಿ ಪಾತ್ರಧಾರಿಣಿ ನಯನಾ ಜೆ.ಸೂಡ.

ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭವು 2023ರ ಜನವರಿ 3ನೇ ವಾರದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯ ಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ವಾಲಿವಧೆ ನಾಟಕದ ಮರು ಪ್ರದರ್ಶನ ಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Similar News