ಶಾಸಕರ ಖರೀದಿ ಸಾಧ್ಯತೆ ತಪ್ಪಿಸಲು ಹಿಮಾಚಲ ಶಾಸಕರಿಗೆ ಚಂಡೀಗಢಕ್ಕೆ ತೆರಳುವಂತೆ ಸೂಚಿಸಿದ ಕಾಂಗ್ರೆಸ್

Update: 2022-12-08 07:07 GMT

ಹೊಸದಿಲ್ಲಿ: ಶಾಸಕರ ಕುದುರೆ ವ್ಯಾಪಾರ ಸಾಧ್ಯತೆಯನ್ನು ತಪ್ಪಿಸಲು ಹಿಮಾಚಲ ಪ್ರದೇಶದ ಎಲ್ಲಾ ಶಾಸಕರು ಚಂಡೀಗಢಕ್ಕೆ ತೆರಳುವಂತೆ ಕಾಂಗ್ರೆಸ್ ಗುರುವಾರ ಸೂಚಿಸಿದೆ ಎಂದು ವರದಿಯಾಗಿದೆ.

ಶಾಸಕರು ತಮ್ಮ ಪ್ರಮಾಣಪತ್ರಗಳನ್ನು ಪಡೆದ ನಂತರ ಚಂಡೀಗಢಕ್ಕೆ ತೆರಳುವಂತೆ ಪಕ್ಷ ತಿಳಿಸಿದೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿಕಟ ಹಣಾಹಣಿ ನಡೆದಿರುವ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರದ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ 36 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ, ಆದರೆ ಬಿಜೆಪಿ 29 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಬಹುಮತಕ್ಕೆ ಕೇವಲ 6 ಶಾಸಕರ ಕೊರತೆ ಎದುರಿಸಲಿದೆ.

Similar News