ಹಿರಿಯಡ್ಕ: ಮನೆಯಲ್ಲಿ ಬೆಂಕಿ ಅನಾಹುತ; ನೊಂದ ಕೃಷಿಕ ಆತ್ಮಹತ್ಯೆ

Update: 2022-12-13 16:02 GMT

ಹಿರಿಯಡ್ಕ, ಡಿ.13: ಮನೆಯ ಕೊಟ್ಟಿಗೆಗೆ ಬೆಂಕಿ ಬಿದ್ದು ತೆಂಗಿನ ಕಾಯಿ, ಬೈಹುಲ್ಲು ಸುಟ್ಟು ಹೋದ ಚಿಂತೆಯಲ್ಲಿ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಡಿ.11ರಂದು ರಾತ್ರಿ ವೇಳೆ ಬೊಮ್ಮರಬೆಟ್ಟು ಹಳೆ ಕೊಲ್ಯಾರು ಎಂಬಲ್ಲಿ ನಡೆದಿದೆ.

ಮೃತರನ್ನು ಕೃಷಿಕ ಶಾಂತೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಇವರು ತಮ್ಮ ಹಳೆಯ ಮನೆಯನ್ನು ಕಳೆದ ಎರಡು ವಾರಗಳ ಹಿಂದೆ ರಿಪೇರಿ ಮಾಡುತ್ತಿದ್ದು, ಡಿ.9ರಂದು ಮನೆಯ ಬಳಿಯಲ್ಲಿರುವ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ಇದರಿಂದ ಕೊಟ್ಟಗೆಯಲ್ಲಿದ್ದ ತೆಂಗಿನಕಾಯಿ ಹಾಗೂ ಬೈಹುಲ್ಲು ಸಂಪೂರ್ಣ ಸುಟ್ಟು ಹೋಗಿತ್ತೆನ್ನಲಾಗಿದೆ. ಇದೇ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ಅವರು ಡಿ.11ರಂದು ರಾತ್ರಿ ಮನೆಯ ಹಿಂಬದಿಯಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News