ಉಪ್ಪಳ: ಶೌಚಾಲಯದ ಗುಂಡಿಗೆ ಬಿದ್ದು 2 ವರ್ಷದ ಬಾಲಕ ಮೃತ್ಯು

Update: 2022-12-14 10:18 GMT

ಕಾಸರಗೋಡು: ಶೌಚಾಲಯದ ಗುಂಡಿಗೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಉಪ್ಪಳದಲ್ಲಿ ನಡೆದಿದೆ.

ಉಪ್ಪಳದ ಅಬ್ದುಲ್  ಸಮದ್ ರವರ ಪುತ್ರ ಅಬ್ದುಲ್ ರಹ್ಮಾನ್ ಸಹದಾದ್ (2) ಮೃತಪಟ್ಟ ಬಾಲಕ. ಮನೆಯ ಹಿಂಬದಿಯಲ್ಲಿರುವ ಶೌಚಾಲಯ ಹೊಂಡಕ್ಕೆ ಬಿದ್ದು ಈ ದುರ್ಘಟನೆ ನಡೆದಿದೆ. ಶೌಚಾಲಯದ ಒಂದು ಭಾಗ ಬಿರುಕು ಬಿಟ್ಟಿದ್ದು, ಬಾಲಕ ಅರಿಯದೆ ಇದರ ಮೇಲೆ ನಡೆದು ಕೊಂಡು ಹೋದಾಗ ಈ ದುರ್ಘಟನೆ ನಡೆದಿದೆ.

ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾಲಕನನ್ನು  ಹೊರ ತೆಗೆದು ಉಪ್ಪಳದ ಆಸ್ಪತ್ರೆ ಗೆ ತಲಪಿಸಿದರೂ  ಜೀವ ಉಳಿಸಲಾಗಲಿಲ್ಲ. ಮಂಜೇಶ್ವರ ಠಾಣಾ ಪೊಲೀಸರು ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ

Similar News