ಸರಣಿ ಅಪಘಾತ: ಬೈಕ್ ಸವಾರ ಮೃತ್ಯು

Update: 2022-12-17 14:34 GMT

ಕೋಟ, ಡಿ.17: ಸರಣಿ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಡಿ.16ರಂದು ರಾತ್ರಿ ಬನ್ನಾಡಿ ಉಪ್ಲಾಡಿ ಬಯಲು ಎಂಬಲ್ಲಿ  ನಡೆದಿದೆ.

ಮೃತರನ್ನು ಬೈಕ್ ಸವಾರ ಗಂಗಾಧರ ಪುಣೇಕರ್ ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕಿನ ಸವಾರ ಪ್ರಕಾಶ್ ಮತ್ತು ಸಹಸವಾರಿಣಿ ಗೀತಾ ಎಂಬವರು ಗಾಯಗೊಂಡಿದ್ದಾರೆ. ಕೋಟ ಹೈಸ್ಕೂಲ್ ಕಡೆಯಿಂದ ಹೋಗುತ್ತಿದ್ದ್ದ ಬೈಕ್, ಓವರ್ ಟೇಕ್ ಭರದಲ್ಲಿ ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಗಂಗಾಧರ ಪುಣೇಕರ್ ಬೈಕ್ ಸಮೇತ ರಸ್ತೆಗೆ ಬಿದ್ದರು. ಈ ವೇಳೆ ಕಾರು ಸವಾರನ ಮೇಲೆ ಹರಿದು, ಗಂಗಾಧರ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News