ಭಾರತ್‌ ಜೋಡೋ ಯಾತ್ರೆ ಬೆಂಬಲಿಸಿ ರಾಹುಲ್‌ ಗಾಂಧಿಗೆ ಪತ್ರ ಬರೆದ ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ

Update: 2023-01-03 08:27 GMT

ಅಯ್ಯೋಧ್ಯ: ರಾಹುಲ್‌ ಗಾಂಧಿ (Rahul Gandhi) ನೇತೃತ್ವದ ಭಾರತ್‌ ಜೋಡೋ ಯಾತ್ರೆ (Bharat Jodo Yatra) ಉತ್ತರ ಪ್ರದೇಶ ಪ್ರವೇಶಿಸಿದೆ. ಈ ನಡುವೆ ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕ (Ram Temple Chief Priest) ಆಚಾರ್ಯ ಸತ್ಯೇಂದ್ರ ದಾಸ್‌ (Acharya Satyendra Das) ಅವರು ಈ ಯಾತ್ರೆಯನ್ನು ಶ್ಲಾಘಿಸಿದ್ದಾರಲ್ಲದೆ  ಶ್ರೀ ರಾಮನ ಅನುಗ್ರಹ ಸದಾ ರಾಹುಲ್‌ ಗಾಂಧಿ ಮೇಲಿರಲಿದೆ ಎಂದಿದ್ದಾರೆ.

ಈ ಕುರಿತು ರಾಹುಲ್‌ ಗಾಂಧಿ ಅವರಿಗೆ ಸತ್ಯೇಂದ್ರ ದಾಸ್‌ ಪತ್ರ ಬರೆದಿದ್ದಾರೆ ಹಾಗೂ ದೇಶದಲ್ಲಿ ಒಗ್ಗಟ್ಟು ಮೂಡಿಸುವ ಈ ಯಾತ್ರೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

"ನಿಮ್ಮ ಈ ಯಾತ್ರೆಯ ಉದ್ದೇಶ ಈಡೇರಲಿ, ನಿಮ್ಮ ದೀರ್ಘಾಯುಷ್ಯಕ್ಕಾಗಿ  ಆಶೀರ್ವದಿಸುತ್ತೇನೆ," ಎಂದು ಆಚಾರ್ಯ ಸತ್ಯೇಂದ್ರ ದಾಸ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

"ನೀವು ಸರ್ವಜನ್‌ ಹಿತಯ್‌ ಸರ್ವಜನ್‌ ಸುಖಾಯ್‌" ಎಂಬ ಉದಾತ್ತ ಧ್ಯೇಯಕ್ಕಾಗಿ ಹೋರಾಡುತ್ತಿದ್ದೀರಿ. ಶ್ರೀ ರಾಮನ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ," ಎಂದು ಅವರು ಆಶೀರ್ವದಿಸಿದ್ದಾರೆ.

"ಕೆಲವು ಕಾಂಗ್ರೆಸ್‌ ನಾಯಕರು ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ. ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಯಾತ್ರೆಗೆ ಶುಭಕೋರಿ ಎಂದು ನಾಯಕರು ಕೋರಿಕೊಂಡರು. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ಶುಭಕೋರಿದ್ದೇನೆ," ಎಂದು ಆಚಾರ್ಯ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

ಇದನ್ನೂ ಓದಿ: 3000 ಕಿ.ಮೀ. ಕ್ರಮಿಸಿದ 'ಭಾರತ್ ಜೋಡೋ ಯಾತ್ರೆ'

Similar News