ಉತ್ತರಕನ್ನಡ: ನಾಲ್ಕು ಬಿಸಿಯೂಟದ ಅಡುಗೆ ಸಿಬ್ಬಂದಿ ವಜಾ ಮಾಡಿ ಹೊಸ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸಭೆಯಲ್ಲಿ ನಿರ್ಣಯ

Update: 2023-01-06 17:29 GMT

ಮುಂಡಗೋಡ:  ಬಿಸಿಯೂಟದ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಅಡುಗೆ ಸಿಬ್ಬಂದಿಗಳನ್ನು ವಜಾ ಮಾಡಿ ಹೊಸ ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಶುಕ್ರವಾರ ಕರೆದ ಸಭೆಯಲ್ಲಿ ಗಣ್ಯಮಾನ್ಯರ, ಪಾಲಕರ ಹಾಗೂ ಶಿಕ್ಷಕರ ಮತ್ತು ಎಸ್.ಡಿ.ಎಮ್.ಸಿ  ಸರ್ವ ಸದಸ್ಯರ, ಊರಿನ ನಾಗರಿಕರ  ಸಮ್ಮುಖದಲ್ಲಿ ನಿರ್ಣಯ ಕೈಗೊಂಡ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದ ದೇವಕ್ಕ ಛಾಯಪ್ಪ ಕಲಾಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಚಿಗಳ್ಳಿ ಗ್ರಾಮದ ದೇವಕ್ಕ ಛಾಯಪ್ಪ ಕಲಾಲ ಸರಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳು ಸರಿಯಾದ ವೇಳೆಗೆ ಅಡುಗೆ ಮಾಡದಿರುವುದು, ಅಡುಗೆಯಲ್ಲಿ ಹುಳ ಬರುವುದು, ಮಕ್ಕಳಿಗೆ ಸರಿಯಾದ ವೇಳೆಗೆ ಹಾಲು ಕೊಡದೆ ಇಲಾಖೆಯ ಆದೇಶ ಪಾಲನೆ ಮಾಡುತ್ತಿರಲಿಲ್ಲ. ಅಡುಗೆ ಸಿಬ್ಬಂದಿಗಳ ನಡುವೆಯೇ  ಜಗಳ ನಡೆಯುತ್ತಿದ್ದವು. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿರುವುದಾಗಿ ಹಲವಾರು ಬಾರಿ ಶಿಕ್ಷಕರ ಬಳಿ ಹಾಗೂ ಗ್ರಾಮ ಸಭೆಯಲ್ಲೂ ವಿದ್ಯಾರ್ಥಿಗಳು ದೂರನ್ನು ನೀಡಿದ್ದರು. 

ಈ ಹಿನ್ನಲೆಯಲ್ಲಿ ಹಲವಾರು ಬಾರಿ ಸರಿಯಾಗಿ ಕೆಲಸ ನಿರ್ವಹಿಸುವಂತೆ ಅಡುಗೆ ಸಿಬ್ಬಂದಿಗಳಿಗೆ ಶಿಕ್ಷಕರು ಹಾಗೂ ಎಸ್‍ಡಿಎಮ್‍ಸಿ ಸದಸ್ಯರು ಸೂಚಿಸಿದ್ದರು. ಈ  ಕುರಿತು ನಾಲ್ಕೈದು ಬಾರಿ ಸಭೆ ಕರೆದು ತಿಳಿಸಲಾಗಿತು. ಒಂದು ಸಭೆಯಲ್ಲಿ  ಕೇತ್ರ ಶಿಕ್ಷಣಾಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ಮಾಜಿ ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ಎಸ್‍ಡಿಎಮ್‍ಸಿ ಅಧ್ಯಕ್ಷ ಫಕ್ಕೀರಸ್ವಾಮಿ ಹುಲಿಯರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಜಿ.ಎನ್. ನಾಯ್ಕ, ಎಸ್‍ಡಿಎಮ್‍ಸಿ ಸದಸ್ಯರು ಹಾಗೂ ಪಾಲಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿತ್ತು.

ಶುಕ್ರವಾರ ನಡೆದ ಸಭೆಯಲ್ಲಿ ಒಬ್ಬ ಅಡುಗೆ ಸಿಬ್ಬಂದಿ ತನಗೆ  ಮೂರು ಅಡುಗೆ ಸಿಬ್ಬಂದಿಗಳು ಸಹಕಾರ ನೀಡುವುದಿಲ್ಲ ತಾವು ಕೆಲಸ ಮಾಡಲು ತಯಾರಿಲ್ಲ ಎಂದು ಹೇಳಿದ್ದರಿಂದ  ಈ ಕುರಿತು ಶಿಕ್ಷಕರು ಹೊಂದಾಣಿಕೆ ಮಾಡಿಕೊಂಡು ಹೋಗಿ ಇದ್ದರೆ ನಾಲ್ಕು ಜನ ಇರಬೇಕು  ಇಲ್ಲದ್ದಿದರೆ ನಾಲ್ಕು ಜನರು ಕೆಲಸದಿಂದ ವಜಾ ಆಗಬೇಕು ಎಂದರು ಆದರೂ ಒಬ್ಬ ಸಿಬ್ಬಂದಿ ಕೆಲಸಮಾಡಲು ಒಪ್ಪಿಕೊಳ್ಳಲೇ ಇಲ್ಲ ಇದರಿಂದ ಗಣ್ಯಮಾನ್ಯರು,  ಎಸ್‍ಡಿಎಮ್‍ಸಿ ಅಧ್ಯಕ್ಷರು ಸರ್ವದಸ್ಯರು,  ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು, ಊರಿನ ಹಿರಿಯರು ನಾಲ್ಕು ಜನ ಅಡುಗೆ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಿ ಹೊಸ ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಭೆಯಲ್ಲಿ  ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಗಣ್ಯರಾದ ಜಿ.ಪ ಮಾಜಿ ಉಪಾಧ್ಯಕ್ಷ ಎಲ್.ಟಿ.ಪಾಟೀಲ, ಪಿ.ಎಸ್.ಸಂಗೂರಮಠ, ಗ್ರಾ.ಪಂ ಅಧ್ಯಕ್ಷ ಭಾರತಿ ನಿಂಬಾಯಿ, ಉಪಾಧ್ಯಕ್ಷೆ ಹುಲಿಗೆವ್ವಾ ಶಿರಗೇರಿ, ಪಿಡಿಒ ಶಿವಾಜಿ ವಾಸಂಬಿ, ಗ್ರಾ.ಪಂ ಸದಸ್ಯ ಪರುಷರಾಮ ಟಿಕೋಜಿ, ಊರಿನ ಹಿರಿಯರಾದ ರಾಜಶೇಖರ ಹಿರೇಮಠ, ಬಾಬಣ್ಣ ಲಾಡ್‍ನವರ, ಎಸ್‍ಡಿಎಂಸಿ ಅಧ್ಯಕ್ಷ ಫಕ್ಕಿರಸ್ವಾಮಿ ಹುಲಿಯಾರ, ಉಪಾಧ್ಯಕ್ಷ ಮಹಾಬಲೇಶ್ವರ ಪಾಟೀಲ ಸೇರಿದಂತೆ ಸರ್ವಸದಸ್ಯರು, ವಿಷ್ಣು ಅಂತೋಜಿ, ಮಾಂತೇಶ ವಾಲ್ಮಿಕಿ, ಕಲ್ಮೇಶ ಕಿವುಡನವರ,  ಹಾಗೂ ಮುಖ್ಯ ಶಿಕ್ಷಕ ದಾಸಪ್ಪ ಎ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಹೇಳಿಕೆ: ಕಳೆದ ಸುಮಾರು ಒಂದು ತಿಂಗಳಿಂದ ಅಡುಗೆ ಸಿಬ್ಬಂದಿಗಳು ಕೆಲಸಕ್ಕೆ ಬರದೇ ಇರುವುದರಿಂದ ಮಕ್ಕಳಿಗೆ ತೊಂದರೆ ಯಾಗಬಾರದು ಹಾಗೂ ಸರಕಾರದ ಬಿಸಿಯೂಟದ ಯೋಜನೆ ಸರಿಯಾಗಿ ಕಾರ್ಯಗತವಾಗಬೇಕೆಂದು ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯ ಶಿಕ್ಷಕರು ಕೆಲವುದಿನ ಅಡುಗೆ ಮಾಡಿದ್ದೇವೆ. ನಂತರ ಇತರೆ ಅಡುಗೆ ಮಾಡುವರ ರಿಗೆ ಕೂಲಿಕೊಟ್ಟು ಅಡುಗೆ ಮಾಡಿಸಿದ್ದೇವೆ ಕೆಲವು ದಿನ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿಯವರು ಸಹಕಾರ ಪಡೆದು ಅಡುಗೆ ಮಾಡಿ ಸರಕಾರದ ಯೋಜನೆ ನಿಲ್ಲದಂತೆ ಮಾಡಿದ್ದೇವೆ. ನಮಗೆ ಅತಿ ಬೇಗನೆ ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಡಬೇಕು ಎಂದು ಆಗ್ರಹಿಸಲಾಯಿತು. 

Similar News