ಕಿಂಗ್ ಪಿನ್ ಗೂ ಬಿಜೆಪಿ ಸಚಿವರಿಗೂ ಇರುವ ನಂಟಿನ ಬಗ್ಗೆ ಮಾತನಾಡಿ: ಯು.ಟಿ.ಖಾದರ್ ​

Update: 2023-01-07 06:59 GMT

ಮಂಗಳೂರು: "ಕಂತೆ ಕಂತೆ ನೋಟುಗಳನ್ನು ಹರಡಿ ಸೆಲ್ಫಿ ತೆಗೆದುಕೊಂಡು ಹಲ್ಲುಕಿರಿಯುವ ವಿವಿಧ ದಂಧೆಯ ಕಿಂಗ್ ಪಿನ್ ಸ್ಯಾಂಟ್ರೋ ರವಿ ಹಾಗೂ ಬಿಜೆಪಿ ಸಚಿವರ, ಕುಟುಂಬಸ್ಥರ ಜೊತೆ ಇರುವ ನಂಟಿನ ಬಗ್ಗೆ ಏಕೆ ಮಾತನಾಡುತ್ತಿಲ್ಲ ಇಲ್ಲ?" ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಸರಕಾರವನ್ನು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "NIA ಬಂಧಿತ ರಿಶಾನ್ ಶೇಕ್ ಎಂಬಾತನ ತಂದೆಯ ಜೊತೆಯಲ್ಲಿ ಇರುವ ಫೋಟೊವನ್ನು ಮುಂದಿಟ್ಟುಕೊಂಡು ಬಿಜೆಪಿ ಸ್ನೇಹಿತರು ಬಾಯಿಯಿಂದ ಬೇಧಿ ಮಾಡುತ್ತಿದ್ದಾರೆ. ನಮಗೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಸರ್ಕಾರದ ಅಧೀನದಲ್ಲಿರುವ NIA ಈ ಬಗ್ಗೆ ನಿಷ್ಪಕ್ಷ ತನಿಖೆ ನಡೆಸಲಿ, ತಪ್ಪೆಸಗಿದ್ದರೆ ಕಠಿಣ ಕ್ರಮಕೈಗೊಳ್ಳಲಿ" ಎಂದು ತಿಳಿಸಿದ್ದಾರೆ.

"ಬಿಜೆಪಿ ಭಯೋತ್ಪಾದನೆ ಬುಡ ಸಮೇತ ಮಟ್ಟ ಹಾಕುವ ಬದಲು ಚುನಾವಣೆಗಾಗಿ ಫೋಟೊ ರಾಜಕೀಯ ಮಾಡುತ್ತಿರುವುದನ್ನು ಜನ ಗಮನಿಸಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Similar News