ಭಟ್ಕಳ: ಹಿರಿಯ ಶಿಕ್ಷಕ ಎಂ.ಆರ್.ಮಾನ್ವಿಗೆ ಅಭಿನಂದನೆ
Update: 2023-01-08 19:18 IST
ಭಟ್ಕಳ: ಕಳೆದ 25 ವರ್ಷಗಳಿಂದ ಶಮ್ಸ್ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತಕರಾಗಿರುವ ಎಂ.ಆರ್.ಮಾನ್ವಿಯವರನ್ನು ರವಿವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅನಿವಾಸಿ ಉದ್ಯಮಿ ಅತೀಕುರ್ರಹ್ಮಾನ್ ಮುನೀರಿ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮೊದಲ ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳು ಅವರಿಗೆ 25 ವರ್ಷಗಳ ಸೇವೆಗೆ ‘ಪವಿತ್ರ ಉಮ್ರಾ’ ಪ್ಯಾಕೇಜ್ ಕೊಡುಗೆಯಾಗಿ ನೀಡಿದರು.
ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 1997ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದ ಎಂ.ಆರ್.ಮಾನ್ವಿ ನಂತರ ಮುಖ್ಯಾಧ್ಯಾಪಕರಾಗಿ 25 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ಮೊಹತೆಶಮ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಇಂಜಿನೀಯರ್ ನಝೀರ್ ಅಹ್ಮದ್, ಮೌಲಾನ ಸೈಯ್ಯದ್ ಝಬೇರ್, ಮೌಲಾನ ಅಝೀಝುರ್ರರಹ್ಮಾನ್ ರುಕ್ನುದ್ದೀನ್ ನದ್ವಿ, ಪ್ರಾಂಶುಪಾಲ ಲಿಯಾಖತ್ ಅಲಿ ಮುಂತಾದವರು ಉಪಸ್ಥಿತರಿದ್ದರು.