ಬೌಂಡರಿ ಉಳಿಸುವ ಭರದಲ್ಲಿ ಪರಸ್ಪರ ಢಿಕ್ಕಿ: ಸ್ಟ್ರೆಚರ್ ಮೂಲಕ ಮೈದಾನದಿಂದ ನಿರ್ಗಮಿಸಿದ ಶ್ರೀಲಂಕಾ ಆಟಗಾರರು

Update: 2023-01-15 14:22 GMT

 ತಿರುವನಂತಪುರ, ಜ.15: ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಅವರ ಶತಕದ ಬಲದಿಂದ ಭಾರತ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿರುವಾಗ ಶ್ರೀಲಂಕಾದ ಇಬ್ಬರು ಆಟಗಾರರು ಬೌಂಡರಿ ಉಳಿಸುವ ಭರದಲ್ಲಿ ಪರಸ್ಪರ ಢಿಕ್ಕಿಯಾಗಿದ್ದಾರೆ. ಈ ಘಟನೆಯು ಶ್ರೀಲಂಕಾಕ್ಕೆ ತೀವ್ರ ಹಿನ್ನಡೆಯಾಗಿದೆ.

43ನೇ ಓವರ್‌ನ ಐದನೇ ಎಸೆತದಲ್ಲಿ ಈ ಘಟನೆ ನಡೆದಿದೆ. ಸ್ಕ್ವಾರ್ ಲೆಗ್ ಬೌಂಡರಿಯಲ್ಲಿ ಕೊಹ್ಲಿ ಹೊಡೆತವನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ ಶ್ರೀಲಂಕಾದ ಫೀಲ್ಡರ್‌ಗಳಾದ ಅಶೆನ್ ಬಂಡಾರ ಹಾಗೂ ಜೆಫ್ರಿ ವಾಂಡರ್ಸೆ ಢಿಕ್ಕಿ ಹೊಡೆದುಕೊಂಡರು.

 ಘಟನೆ ನಡೆದ ತಕ್ಷಣ ಶ್ರೀಲಂಕಾ ಆಟಗಾರರು ಇಬ್ಬರು ಆಟಗಾರರನ್ನು ಸುತ್ತುವರಿದರು. ವೈದ್ಯಕೀಯ ತಂಡಗಳು ಮೈದಾನಕ್ಕೆ ಧಾವಿಸಿದವು. ನೋವಿನಿಂದ ಬಳಲುತ್ತಿದ್ದ ಇಬ್ಬರನ್ನು ಸ್ಟ್ರೆಚರ್‌ನ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

Similar News