ದಕ್ಷಿಣ ದಿಲ್ಲಿಯಲ್ಲಿ ಕೊಳಗೇರಿಗಳ ಧ್ವಂಸ: ಬಿಜೆಪಿ ಸಂಸದನ ನಿವಾಸದೆದುರು ಆಪ್ ಶಾಸಕರ ಪ್ರತಿಭಟನೆ

Update: 2023-01-21 15:30 GMT

ಹೊಸದಿಲ್ಲಿ,ಜ.21: ದಕ್ಷಿಣ ದಿಲ್ಲಿಯಲ್ಲಿ ಕೊಳಗೇರಿಗಳ ಧ್ವಂಸ ಕಾರ್ಯಾಚರಣೆಯನ್ನು ವಿರೋಧಿಸಿ ಆಪ್ ಶಾಸಕರು ಶನಿವಾರ ಲೋಧಿ ರಸ್ತೆಯಲ್ಲಿರುವ ಬಿಜೆಪಿ ಸಂಸದ ರಮೇಶ ಬಿಧುರಿ(Ramesh Bidhuri)ಯವರ ನಿವಾಸದ ಹೊರಗೆ ಧರಣಿಯನ್ನು ನಡೆಸಿದರು. ಕೊಳಗೇರಿಗಳ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‌ಕೊಳಗೇರಿ ನಿವಾಸಿಗಳು ‘ಬಿಜೆಪಿಗೆ ನಾಚಿಕೆಯಾಗಬೇಕು,ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸಿ’ ಎಂಬ ಭಿತ್ತಿಪತ್ರಗಳನ್ನೂ ಪ್ರದರ್ಶಿಸಿದರು.

ಉಚಿತ ಫ್ಲಾಟ್ಗಳನ್ನು ಒದಗಿಸುವುದಾಗಿ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳ ಸಂದರ್ಭದಲ್ಲಿ ಕೊಳಗೇರಿ ನಿವಾಸಿಗಳಿಗೆ ಬಿಜೆಪಿಯು ಭರವಸೆ ನೀಡಿತ್ತಾದರೂ ಕೇಂದ್ರ ಸರಕಾರವು ನಗರದಲ್ಲಿಯ ಕೊಳಗೇರಿ ನಿವಾಸಿಗಳಿಗೆ ನೋಟಿಸ್ಗಳನ್ನು ಕಳುಹಿಸುತ್ತಿದೆ ಎಂದು ಆಪ್ ಶಾಸಕಿ ಆತಿಷಿ ಶುಕ್ರವಾರ ಆರೋಪಿಸಿದ್ದರು.

Similar News