ಉಡುಪಿ| ​ಯಕ್ಷಗಾನದಲ್ಲಿ ಕ್ಷೌರಿಕ ವೃತ್ತಿಗೆ ಅವಮಾನ: ಸವಿತಾ ಸಮಾಜ ಖಂಡನೆ

Update: 2023-01-26 16:15 GMT

ಉಡುಪಿ: ಇತ್ತೀಚೆಗೆ ಕೋಟದಲ್ಲಿ ನಡೆದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನದಲ್ಲಿ ಓರ್ವ ಕಲಾವಿದ ಕ್ಷೌರಿಕ ವೃತ್ತಿ ಹಾಗೂ ಜಾತಿಯನ್ನು ಹೀನಾಯವಾಗಿ ಅಪಹಾಸ್ಯ ಮಾಡಿದ್ದನ್ನು ಉಡುಪಿ ಜಿಲ್ಲಾ ಸವಿತಾ ಸಮಾಜ ತೀವ್ರವಾಗಿ ಖಂಡಿಸಿದೆ.

ಇತ್ತೀಚೆಗೆ ಕುಲಕಸುಬಾದ ಕ್ಷೌರಿಕ ವೃತ್ತಿ ವಿಮಖವಾಗುವ ಸಂದರ್ಭದಲ್ಲಿ ಈ ನಮ್ಮ ವೃತ್ತಿಪರ ಸಂಘಟಣೆಯಾದ ಸವಿತ ಸಮಾಜ ಮುಖಾಂತರ ಈ ವೃತ್ತಿಗೆ ಒಂದು ಬೆಲೆ ಗೌರವ ಸಿಗುವ ಸಂದರ್ಭದಲ್ಲಿ ಇಂತಹ ಪ್ರಸಿದ್ಧ ಭಕ್ತಿಪ್ರಧಾನ ಕ್ಷೇತ್ರದ ಹೆಸರಲ್ಲಿ ನಡೆಸುವ ಮೇಳದಲ್ಲಿ ಈ ರೀತಿ ಕಲಾವಿದನಿಂದ ಅಪಹಾಸ್ಯ ಮಾಡಿ ವೃತ್ತಿಗೆ, ಕುಲಕ್ಕೆ ವಿಶೇಷವಾಗಿ ಈ ಯಕ್ಷಗಾನದ ಹಾಗೂ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ. ಈ ರೀತಿ ಮುಜುಗರ ಮಾಡುವ ಕಲಾವಿದನನ್ನು ಮೇಳದಿಂದ ಉಚ್ಚಾಟಿಸಬೇಕೆಂದು ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು ಹಾಗೂ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಆಗ್ರಹಿಸಿದ್ದಾರೆ.

Similar News