ಬಂಟ್ವಾಳ: "ಭಾರತ್ ಜೋಡೊ" ಸಮಾರೋಪ ಪ್ರಯುಕ್ತ ಧ್ವಜಾರೋಹಣ

Update: 2023-01-31 05:51 GMT

ಬಂಟ್ವಾಳ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರ ಭಾರತ್ ಜೋಡೊ ಸಮಾರೋಪ ಸಮಾರಂಭದ ಪ್ರಯುಕ್ತ ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವು ಮಾಜಿ ಸಚಿವ ಬಿ.ರಮಾನಾಥ ರೈಯವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಅವರು ,  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,790 ಕಿ.ಮೀ ಪಾದಯಾತ್ರೆಯ ಮುಖಾಂತರ ಕ್ರಮಿಸಿ ಜಾತಿ-ಜಾತಿಯ ಮಧ್ಯೆ, ಧರ್ಮ ಧರ್ಮದ ಮಧ್ಯೆ ಪ್ರೀತಿಯ ಹೃದಯವನ್ನು ಜೋಡಿಸುವ ಹಾಗೂ ಭಾರತವನ್ನು ಬಲಿಷ್ಠಗೊಳಿಸುವಲ್ಲಿ ಭಾರತ್ ಜೋಡೊ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಾಯಿಲಪ್ಪ ಸಾಲ್ಯಾನ್, ವಾಸು ಪೂಜಾರಿ ಲೊರೆಟ್ಟೋ, ಜನಾರ್ದನ ಚೆಂಡ್ತಿಮಾರ್, ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಸುರೇಶ್ ಜೋರ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲವೀನಾ ಎಲ್ಲ ಮೋರಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ ಶೆಣೈ, ಜಗದೀಶ್ ಕೊಯಿಲ ಪಕ್ಷ ಪ್ರಮುಖರಾದ ಮಹಾಬಲ ಬಂಗೇರ, ಜಗನ್ನಾಥ ತುಂಬೆ, ಉಮೇಶ್ ಕುಲಾಲ್, ರಿಯಾಝ್ ಬಂಟ್ವಾಳ, ನಿತ್ಯಾನಂದ ಕಲಾಯಿ, ಅಮ್ಮು ಅರ್ಭಿಗುಡ್ಡೆ, ನಾರಯಣ ನೇರಂಬೋಳ್, ಮನೋಹರ್ ನೇರಂಬೊಳ್, ಜಯಕರ ಶೆಟ್ಟಿ, ಮಹಮ್ಮದ್‌ ಸಂಗಬೆಟ್ಟು, ವೆಂಕಪ್ಪ ಪೂಜಾರಿ, ದೀನೇಶ್ ಶೆಟ್ಟಿಗಾರ್, ಆಶೋಕ್ ಆಚಾರ್ಯ, ವಸಂತಿ ಚಂದಪ್ಪ, ಅಬ್ದುಲ್ ರಹಿಮಾನ್, ಚಂದ್ರಶೇಖರ್ ಆಚಾರ್ಯ, ಪದ್ಮನಾಭ ಸಾವಂತ್, ರಿಚರ್ಡ್ ಮಿನೇಜಸ್, ಸಂಜೀವ ಚೆಂಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.

Similar News