ವಿಶಾಖಪಟ್ಟಣ ನಮ್ಮ ಹೊಸ ರಾಜಧಾನಿ: ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

Update: 2023-01-31 17:19 GMT

ವಿಶಾಖಪಟ್ಟಣಮ್, ಜ. 31: ವಿಶಾಖಪಟ್ಟಣಮ್ ಆಂಧ್ರಪ್ರದೇಶದ ರಾಜಧಾನಿಯಾಗಿರುತ್ತದೆ ಹಾಗೂ ‘‘ಮುಂದಿನ ತಿಂಗಳುಗಳಲ್ಲಿ’’ ನಾನು ಅಲ್ಲಿಗೆ ಸ್ಥಳಾಂತರಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಜಗನ್ ರೆಡ್ಡಿ ಮಂಗಳವಾರ ಘೋಷಿಸಿದರು.

ಮೂರು ರಾಜಧಾನಿಗಳನ್ನು ಹೊಂದುವ ತನ್ನ ಯೋಜನೆಗೆ ಅನುಗುಣವಾಗಿ, ವಿಶಾಖಪಟ್ಟಣಮ್ ನಗರವನ್ನು ರಾಜಧಾನಿಯಾಗಿ ಅವರು ಘೋಷಿಸಿದ್ದಾರೆ ಎನ್ನಲಾಗಿದೆ. ಅವರ ಯೋಜನೆಯಲ್ಲಿರುವ ಇನ್ನೆರಡು ರಾಜಧಾನಿಗಳೆಂದರೆ ಕರ್ನೂಲ್ ಮತ್ತು ಪ್ರಸಕ್ತ ರಾಜಧಾನಿ ಅಮರಾವತಿ.
ಮೂರು ರಾಜಧಾನಿಗಳನ್ನು ನಿರ್ಮಿಸುವ ಉದ್ದೇಶಕ್ಕಾಗಿ ಕಾನೂನು ಮಾಡಲಾಗದು ಎಂಬುದಾಗಿ ಕಳೆದ ವರ್ಷ ಹೈಕೋರ್ಟ್ ಹೇಳಿರುವ ಹೊರತಾಗಿಯೂ ಅವರು ತನ್ನ ಯೋಜನೆಯಿಂದ ಹಿಂದೆ ಸರಿದಿಲ್ಲ.ಈ ವಿಷಯ ಈಗ ಸುಪ್ರೀಂ ಕೋರ್ಟ್ನಲ್ಲಿದೆ. ರೆಡ್ಡಿಯ ವೈಎಸ್ಆರ್ಪಿ ಸರಕಾರವು ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ.

Similar News