ಫೆ.5: ರುದ್ರ ಥಿಯೇಟರ್ ನ 'ಶೂದ್ರ ಶಿವ' ನಾಟಕ ಪ್ರದರ್ಶನ

Update: 2023-02-01 09:56 GMT

ಮಂಗಳೂರು, ಫೆ.1: ರುದ್ರ ಥಿಯೇಟರ್, ಮಂಗಳೂರು (ರಿ) ಅವರಿಂದ ಫೆ.5ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶೂದ್ರ ಶಿವ ಎಂಬ ಹೆಸರಿನ  ನಾಟಕ ಪ್ರದರ್ಶನಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆ ಯ ಮಾರ್ಗ ದರ್ಶಕ ಪದ್ಮರಾಜ್, ಅಂದು ಸಂಜೆ 5:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನಾಟಕದ ಶೀರ್ಷಿಕೆಯನ್ನು ಈಗಾಗಲೇ ಬಿಡುಗಡೆ ಮಾಡಿರುತ್ತಾರೆ. ಅವರ ಆಶೀರ್ವಾದದೊಂದಿಗೆ ರಂಗ ಪ್ರಯೋಗ ಆರಂಭವಾಗಲಿದೆ ಎಂದು ಎಂದರು.

ನಾಟಕ ನಿರ್ದೇಶಕ ವಿದ್ದು ಉಚ್ಚಿಲ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆ ಮತ್ತು ತತ್ವ ಸಂದೇಶಗಳನ್ನು ಒಳಗೊಂಡ, ಬಾಬು ಶಿವ ಪೂಜಾರಿಯವರ ಶ್ರೀ ನಾರಾಯಣ ಗುರು ವಿಜಯ ದರ್ಶನ ಕೃತಿಯನ್ನು ಮೂಲ ಪ್ರೇರಣೆಯಾಗಿ ಪಡೆದು  ಈ ನಾಟಕವನ್ನು ರಚಿಸಲಾಗಿದೆ. ಮಂಗಳೂರಿನ ಮೊದಲ ಪ್ರದರ್ಶನದ ನಂತರ ಈ ನಾಟಕವು ರಾಜ್ಯದೆಲ್ಲೆಡೆ ಪ್ರದರ್ಶನವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಾಟಕದ ಗೀತ ರಚನೆಕಾರ ಮನೋಜ್ ವಾಮಂಜೂರು, ತಂಡದ ಸದಸ್ಯರಾದ ಲೋಕೇಶ್ ಉಚ್ಚಿಲ ಉಪಸ್ಥಿತರಿದ್ದರು.

Similar News