ಪೆರ್ಲ | ರಬ್ಬರ್ ಎಸ್ಟೇಟ್ ಮನೆಯಲ್ಲಿ ಮಹಿಳೆಯ ಕೊಲೆ ಪ್ರಕರಣ: ಆರೋಪಿಯ ಬಂಧನ

Update: 2023-02-03 08:57 GMT

ಕಾಸರಗೋಡು:  ಪೆರ್ಲ ಏಳ್ಕಾನ ಶೇಣಿ ಮಞಾರೆಯ ರಬ್ಬರ್ ಎಸ್ಟೇಟ್ ಮನೆಯಲ್ಲಿ ಮಹಿಳೆಯ ಕೊಲೆ ಪ್ರಕರಣದ ಆರೋಪಿಯನ್ನು ಬದಿಯಡ್ಕ ಪೊಲೀಸರು ತಿರುವನಂತಪುರ ಎಂಬಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.

ಮೃತ ಮಹಿಳೆ ನೀತು ಕೃಷ್ಣ ಅವರ ಪತಿ, ಪುಲ್ಪಳ್ಳಿಯ ಆ್ಯಂಟೋ ಸೆಬಾಸ್ಟಿಯನ್ (32) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ರಬ್ಬರ್ ಟ್ಯಾಪಿಂಗ್ ಕಾರ್ಮಿಕೆಯಾಗಿದ್ದ ಕೊಲ್ಲಂ ಮೂಲದ ನೀತು ಕೃಷ್ಣ ರಬ್ಬರ್ ಎಸ್ಟೇಟ್ ಮನೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು.

"ಕೊಲೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದು, ಈತನನ್ನು ತಿರುವನಂತಪುರದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಇಂದು ಸಂಜೆ ಕಾಸರಗೋಡಿಗೆ ಕರೆ ತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Similar News