ಮಹಾರಾಷ್ಟ್ರ ರಾಜ್ಯ ಆರ್ಥಿಕ ಸಲಹಾ ಮಂಡಳಿಯ ಭಾಗವಾಗಲಿರುವ ಕರಣ್‌ ಅದಾನಿ, ಅನಂತ್‌ ಅಂಬಾನಿ

Update: 2023-02-06 16:10 GMT

ಹೊಸದಿಲ್ಲಿ: ಕರಣ್ ಅದಾನಿ(Karan Adani) ಮತ್ತು ಅನಂತ್ ಅಂಬಾನಿ(Anant Ambani) ಅವರನ್ನು ಒಳಗೊಂಡಿರುವ ಮಹಾರಾಷ್ಟ್ರ ರಾಜ್ಯ ಆರ್ಥಿಕ ಸಲಹಾ ಮಂಡಳಿಯ (EAC) ನೇತೃತ್ವವನ್ನು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್(N.Chandrasekaran) ಅವರು ವಹಿಸಲಿದ್ದಾರೆ ಎಂದು ಸರ್ಕಾರದ ಸೋಮವಾರ ತಿಳಿಸಿದೆ.

ಗೌತಮ್ ಅದಾನಿ(Gautam Adani)ಯವರ ಪುತ್ರರಾಗಿರುವ ಅದಾನಿ ಪೋರ್ಟ್ಸ್ ಮತ್ತು SEZ ಲಿಮಿಟೆಡ್‌ನ ಸಿಇಒ ಕರಣ್ ಅದಾನಿ ಅವರು ಹಿಂಡೆನ್‌ಬರ್ಗ್ ರಿಸರ್ಚ್‌ ವರದಿಯಲ್ಲಿ ಎತ್ತಲ್ಪಟ್ಟಿರುವ ಅದಾನಿ ಗ್ರೂಪ್‌ನಲ್ಲಿನ ಷೇರು ವಂಚನೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ.  

" ಆರ್ಥಿಕ ಸಲಹಾ ಮಂಡಳಿಯು ಆರ್ಥಿಕ ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ ಸ್ವತಂತ್ರ ಸಂಸ್ಥೆಯಾಗಿರಲಿದೆ" ಎಂದು ಸರ್ಕಾರ ಹೇಳಿದೆ.

Similar News