ದಿಲ್ಲಿ ಮದ್ಯ ನೀತಿ ಪ್ರಕರಣ: ಕೆಸಿಆರ್ ಮಗಳ ಮಾಜಿ ಆಡಿಟರ್ ನನ್ನು ಬಂಧಿಸಿದ ಸಿಬಿಐ

Update: 2023-02-08 04:30 GMT

ಹೊಸದಿಲ್ಲಿ: ಕೆಸಿಆರ್ ಅವರ ಪುತ್ರಿ ಕೆ.ಕವಿತಾ ಅವರೊಂದಿಗೆ ಈ ಹಿಂದೆ ಉದ್ಯೋಗಿಯಾಗಿದ್ದ ತೆಲಂಗಾಣ ಮೂಲದ ಚಾರ್ಟರ್ಡ್ ಅಕೌಂಟೆಂಟ್ ನನ್ನು ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಅವರನ್ನು ರಾಷ್ಟ್ರ ರಾಜಧಾನಿಗೆ ಕರೆಸಿ ಬಂಧಿಸಿದೆ.

ಕೆ. ಕವಿತಾ ಅವರ ಮಾಜಿ ಆಡಿಟರ್ ಬುಚ್ಚಿ ಬಾಬು ಅವರು ಪ್ರಕರಣದಲ್ಲಿ "ಸೌತ್ ಗ್ರೂಪ್" ಅನ್ನು ಪ್ರತಿನಿಧಿಸಿದ್ದಾರೆ ಎಂದು ಸಿಬಿಐ ಹೇಳಿದೆ.

ಬಾಬು ಅವರು ತನಿಖೆಗೆ ಸಹಕರಿಸದ ಕಾರಣಕ್ಕೆ ಮಂಗಳವಾರ ಸಂಜೆ ಬಂಧಿಸಲಾಯಿತು ಹಾಗೂ  ಅವರ ಉತ್ತರ ತಪ್ಪಿಸಿಕೊಳ್ಳುವ ರೀತಿಯಲ್ಲಿದ್ದಂತೆ ಕಂಡುಬಂದಿದೆ ಎಂದು ಸಿಬಿಐ ತಿಳಿಸಿದೆ.

ಇದಕ್ಕೂ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 12 ರಂದು ಹೈದರಾಬಾದ್‌ನಲ್ಲಿ ಸಿಬಿಐ ತಂಡವು ಕೆ.ಕವಿತಾ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

Similar News