ತ್ರಿಪುರಾಕ್ಕೆ ಅಸ್ಸಾಂ, ಗುಜರಾತ್ ಪೊಲೀಸರು: ಆಯೋಗಕ್ಕೆ ಸಿಪಿಎಂ ದೂರು

Update: 2023-02-11 04:06 GMT

ಹೊಸದಿಲ್ಲಿ: ಚುನಾವಣೆ ಘೋಷಣೆಯಾಗಿರುವ ತ್ರಿಪುರಾದಲ್ಲಿ ಅರೆ ಮಿಲಿಟರಿ ಪಡೆಗಳನ್ನು ನಿಯೋಜಿಸುವ ಬದಲು ಗುಜರಾತ್ ಮತ್ತು ಅಸ್ಸಾಂ ಪೊಲೀಸರನ್ನು ನಿಯೋಜಿಸಿರುವ ಸರ್ಕಾರದ ಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಸಿಪಿಎಂ ಸದಸ್ಯ ನೀಲೋತ್ಪಲ ಬಸು ಈ ಸಂಬಂಧ ಆಯೋಗಕ್ಕೆ ಪತ್ರ ಬರೆದಿದ್ದು, ಈ ನಿಯೋಜನೆ ಅಸಹಜ ಎಂದು ಪ್ರತಿಪಾದಿಸಿದ್ದಾರೆ. ಕೆಲ ಪ್ರದೇಶಗಳಲ್ಲಿ ಗಡಿಭದ್ರತಾ ಪಡೆ ಸಿಬ್ಬಂದಿಯ ಬದಲು ಗುಜರಾತ್ ಹಾಗೂ ಅಸ್ಸಾಂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.

ಕೇವಲ ಕೇಂದ್ರೀಯ ಅರೆ ಮಿಲಿಟರಿ ಪಡೆಯನ್ನಷ್ಟೇ ನಿಯೋಜಿಸಬೇಖು ಎಂದು ಆಗ್ರಹಿಸಿರುವ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ತ್ರಿಪುರಾ ಚುನಾವಣೆಗಾಗಿ "ವರ್ಚುವಲ್ ಪ್ರಚಾರ"ದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರ ನಿಯೋಜನೆ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

Similar News