ಕುಂಬಳೆ: ರಾಜ್ಯ ಮಟ್ಟದ ಜನಕೀಯ ಪ್ರತಿರೋಧ ಯಾತ್ರೆಗೆ ಸಿಎಂ ಪಿಣರಾಯಿ ವಿಜಯನ್ ಚಾಲನೆ

ಕೇಂದ್ರ ಸರಕಾರದ ವಿರುದ್ಧ ಸಿಪಿಐಎಂ ಕೇರಳ ನೇತೃತ್ವದಲ್ಲಿ ಯಾತ್ರೆ

Update: 2023-02-20 16:32 GMT

ಕಾಸರಗೋಡು : ಕೇಂದ್ರ ಸರಕಾರದ ಜನವಿರೋಧಿ  ನೀತಿ ಹಾಗೂ  ಕೋಮುವಾದದ ವಿರುದ್ಧ ಸಿಪಿಐಎಂ ಕೇರಳ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಮಾಸ್ಟರ್ ನೇತೃತ್ವದ ರಾಜ್ಯ ಮಟ್ಟದ ಜನಕೀಯ ಪ್ರತಿರೋಧ ಯಾತ್ರೆಗೆ ಸೋಮವಾರ ಕುಂಬಳೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ   ಪಿಣರಾಯಿ ವಿಜಯನ್  ಚಾಲನೆ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಾದು ಹೋಗಲಿರುವ ಜಾಥಾ ಮಾರ್ಚ್ 28ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.

ಸಮಾರಂಭದಲ್ಲಿ   ಶಾಸಕ ಸಿ.ಎಚ್. ಕು೦ಞಾಂಬು , ಕೆ.ಟಿ ಜಲೀಲ್,    ಕೆ.ಪಿ ಸತೀಶ್ಚಂದ್ರನ್,  ಪಿ.ಕೆ  ಶ್ರೀಮತಿ ಟೀಚರ್, ಕೆ.ವಿ  ಕು೦ಞಿರಾಮನ್,   ಎಂ. ಸ್ವರಾಜ್, ಎಂ.ವಿ ಬಾಲಕೃಷ್ಣನ್ ನಂಬ್ಯಾರ್, ಪಿ.ಕೆ ಬಿಜು, ಸಿ.ಎಸ್  ಸುಜಾತಾ, ಕೆ.ಆರ್ ಜಯಾನಂದ, ವಿ.ವಿ ರಮೇಶನ್, ಜೇಕ್ ಪಿ. ಥಾಮಸ್, ಡಿ. ಸುಬ್ಬಣ್ಣ ಆಳ್ವ  ಹಾಗೂ ಇನ್ನಿತರ ಮುಖಂಡರು  ಉಪಸ್ಥಿತರಿದ್ದರು.

ಪಿ.ಕೆ ಬಿಜು  ಜಾಥಾ ಮೆನೇಜರ್ ಆಗಿದ್ದು, ಕೇಂದ್ರ ಸಮಿತಿ ಸದಸ್ಯೆ ಸಿ.ಎಸ್. ಸುಜಾತಾ, ರಾಜ್ಯ ಕಾರ್ಯದರ್ಶಿ ಎಂ. ಸ್ವರಾಜ್, ಜೇಕ್ ಸಿ. ಥಾಮಸ್ ಮತ್ತು ಶಾಸಕ  ಕೆ.ಟಿ.ಜಲೀಲ್  ಜಾಥಾ ಸದಸ್ಯರಾಗಿದ್ದಾರೆ.

Similar News