ಕಾಸರಗೋಡು: ಉದ್ಯೋಗಿ ಕೊಲೆ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ

Update: 2023-03-05 06:49 GMT

ಕಾಸರಗೋಡು : ಗಲ್ಫ್ ಉದ್ಯೋಗಿ ಅಬೂಬಕ್ಕರ್ ಸಿದ್ದೀಕ್ ನನ್ನು ಅಪಹರಿಸಿ ಕೊಲೆಗೈದ  ಪ್ರಕರಣಕ್ಕೆ ಸಂಬಂಧ ಪಟ್ಟಂತೆ  ತಲೆ ಮರೆಸಿಕೊಂಡಿದ್ದ ಓರ್ವ ಆರೋಪಿ ಯನ್ನು ತನಿಖಾ ತಂಡ ಬಂಧಿಸಿದೆ.

ಪೈವಳಿಕೆ ಪಳ್ಳಿಕೂಡಲ್ ನ ಅಬ್ದುಲ್ ಜಲೀಲ್ (29) ಬಂಧಿತ ಆರೋಪಿ. ಕೃತ್ಯದ ಬಳಿಕ ಈತ ವಿದೇಶಕ್ಕೆ ಪರಾರಿಯಾಗಿದ್ದು, ಊರಿಗೆ ಮರಳುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಣ್ಣೂರು ವಿಮಾನ ನಿಲ್ದಾಣ ದಿಂದ ಈತ ನನ್ನು ಬಂಧಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ನೇರವಾಗಿ ಶಾಮೀಲಾದ ಹಾಗೂ ಸಂಚು ರೂಪಿಸಿದವರು ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
 

Similar News