ರಸ್ತೆ ಅಪಘಾತ: ಸಹೋದರರಿಬ್ಬರು ಸೇರಿ ಮೂವರು ಮೃತ್ಯು

Update: 2023-03-09 13:34 GMT

ಮುಂಡಗೋಡ : ಕಾರು ಅಪಘಾತದಲ್ಲಿ ಮೂರು ಯುವಕರು ಮೃತಪಟ್ಟ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆ ರಾಮಾಪುರ ಹತ್ತಿರ ಬುಧವಾರ ರಾತ್ರಿ ಸಂಭವಿಸಿದೆ.

ಮೃತ ಇಬ್ಬರು ಯುವಕರನ್ನು ಬಸವನ ಬೀದಿ ನಿವಾಸಿ ಶಿವಾನಂದ ಗಾಣಗೇರ ಅವರ ಪುತ್ರರಾದ ಗಣೇಶ (23) ಹಾಗೂ ಮಹೇಶ (22), ಇನ್ನೋರ್ವ ಹುಬ್ಬಳ್ಳಿ-ಶಿರಸಿ ರಸ್ತೆ ಶಿವಾಜಿ ಸರ್ಕಲ್ ನಿವಾಸಿ ಶಂಕರಯ್ಯ ಹಿರೇಮಠ ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಐದು ಸ್ನೇಹಿತರು ತಾಲೂಕಿನ ಪಾಳಾಗ್ರಾಮದಲ್ಲಿ ನಡೆಯುತ್ತಿರುವ ಜಾತ್ರಾಮಹೋತ್ಸಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಹೋದರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಇನ್ನೋರ್ವ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಇಲ್ಲಿನ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Similar News