ಬಾವಿಗೆ ಹಾರಿ ಆತ್ಮಹತ್ಯೆ

Update: 2023-03-09 16:00 GMT

ಬೈಂದೂರು: ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವೃದ್ಧೆಯೊಬ್ಬರು ಮನೆಯ ಎದುರಿನ ಪಂಚಾಯತ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಕೆರ್ಗಾಲು ಗ್ರಾಮದ ನಯ್ಕನಕಟ್ಟೆ ಚರಮಕ್ಕಿ ಎಂಬಲ್ಲಿಂದ ವರದಿಯಾಗಿದೆ.

ಮೃತರನ್ನು ಅಬ್ಬಕ್ಕ (63) ಎಂದು ಗುರುತಿಸಲಾಗಿದೆ. ಇವರು ವರ್ಷದ ಹಿಂದೆ ಮನೆಯಲ್ಲಿ ಕಾಲುಜಾರಿ ಬಿದ್ದು ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆದಿದ್ದು, ಆ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದರು. ಬುಧವಾರ ಬೆಳಗ್ಗೆ ಮಗಳು ಸುಶೀಲ ತನ್ನ ಮಗಳನ್ನು ಶಾಲೆಗೆ ಬಿಟ್ಟುಬರಲು ತೆರಳಿದಾಗ ಮನೆಯ ಪಕ್ಕದ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News