ಕಾಸರಗೋಡು: ಕೋಣ ತಿವಿತಕ್ಕೆ ಓರ್ವ ಬಲಿ, ಹಲವು ಮಂದಿಗೆ ಗಾಯ

Update: 2023-03-09 16:37 GMT

ಕಾಸರಗೋಡು: ಕೋಣನ ತಿವಿತಕ್ಕೆ ಓರ್ವ ಮೃತಪಟ್ಟು, ಹಲವು ಮಂದಿ ಗಾಯಗೊಂಡ ಘಟನೆ ಗುರುವಾರ ಸಂಜೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.

ಕರ್ನಾಟಕ ಚಿತ್ರದುರ್ಗದ ಸಿದ್ದಿಕ್ ( 22) ಮೃತಪಟ್ಟವರು.

ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತರಲಾಗಿದ್ದ ಕೋಣ ವಾಹನದಿಂದ ಕೆಳಗಿಳಿಸುತ್ತಿದ್ದಾಗ ಹಗ್ಗ ತುಂಡರಿಸಿ  ಓಡಿದ್ದು, ಹಿಡಿಯಲೆತ್ನಿಸಿದಾಗ ಸಿದ್ದಿಕ್  ತಿವಿತಕ್ಕೆ ಒಳಗಾಗಿದ್ದಾರೆ. ಗಂಭೀರ ಗಾಯಗೊಂಡ ಸಿದ್ದಿಕ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟರು.

ಕಿಲೋ ಮೀಟರ್ ಗಳಷ್ಟು ದೂರ ಓಡಿದ ಕೋಣ ದಾಂಧಲೆ ನಡೆಸಿದ್ದು, ಎರಡು ಅಂಗಡಿಗಳಿಗೆ ನುಗ್ಗಿ ಹಾನಿ ಮಾಡಿದೆ. ಇದಲ್ಲದೆ ವಾಹನಗಳಿಗೂ ಹಾನಿಯಾಗಿದೆ.  ಭಯದಿಂದ ಹಲವು ಮಂದಿ ಓಡಿ ತಪ್ಪಿಸಲೆತ್ನಿಸಿದಾಗ  20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಗಂಟೆಗಳ ಕಾಲ ಪರಿಸರದಲ್ಲಿ ಭಯ ಸೃಷ್ಟಿಸಿದ ಕೋಣವನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Similar News