ಉತ್ತರ ಕನ್ನಡ: ಎಸ್.ವೈ.ಎಸ್ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

Update: 2023-03-10 05:02 GMT

ಉತ್ತರ ಕನ್ನಡ, ಮಾ.10: ಕರ್ನಾಟಕ ರಾಜ್ಯ ಸುನ್ನೀ‌ ಯುವಜನ ಸಂಘದ ಉತ್ತರ ಕನ್ನಡ ಜಿಲ್ಲಾ ಮಹಾಸಭೆಯು ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ .ಝೈನೀ ಕಾಮಿಲ್  ಅವರ ನೇತೃತ್ವದಲ್ಲಿ ಅಂಕೋಲದ ಪುರೋಹಿತ್ ಹೋಟೆಲ್ ಸಭಾಂಗಣದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ. ಕೆ.ಎಂ.ಶರೀಫ್ ಭಟ್ಕಲ್ ಅವರು ಅಧ್ಯಕ್ಷತೆಯಲ್ಲಿ ನಡೆಯಿತು.  ಸಭೆಯನ್ನು ಅಂಕೋಲ ಮಸ್‌ನವೀ ಅಕಾಡೆಮಿಯ ನಿರ್ದೇಶಕರಾದ ಬಿ.ಎ.ಇಬ್ರಾಹಿಂ ಸಖಾಫಿ  ಉಧ್ಘಾಟಿಸಿದರು. 

ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಸೈದಲವಿ ಸಖಾಫಿ ಗಂಗಾವಳಿ, ಪ್ರಧಾನ ಕಾರ್ಯದರ್ಶಿಯಾಗಿ ಫಝಲ್ ಶಿರಸಿ, ಕೋಶಾಧಿಕಾರಿಯಾಗಿ ಶರೀಫ್ ಕೆ.ಎಂ.ಭಟ್ಕಲ್‌, ಉಪಾಧ್ಯಕ್ಷರಾಗಿ ಅಬ್ದುಲ್ ಕರೀಂ‌ ಸಾಲಿಯಾ ಅಂಕೋಲ ಆಯ್ಕೆಯಾದರು.

ಕಾರ್ಯದರ್ಶಿಗಳಾಗಿ ಆರಿಫ್ ಸ‌ಅದಿ ಗುಲ್ಮಿ (ಸಂಘಟನೆ), ಅಬ್ದುಲ್ ಖಾದರ್ ಮದನಿ‌ ಹೊನ್ನಾವರ (ದ‌ಅ್‌ವಾ), ಅಬ್ದುಲ್ ಹಮೀದ್ ಸಾಗರ್ (ಸೋಷಿಯಲ್), ಜಾಫರ್ ಸಂತೆಗುಳಿ (ಕಲ್ಚರಲ್), ಮನ್ಸೂರ್ ಮಿರ್ಜಾನ್ (ಸಾಂತ್ವನ), ಇಸ್ಮಾಈಲ್ ಗಂಗಾವಳಿ (ಇಸಾಬಾ) ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸದಸ್ಯರಾಗಿ ಡಾ.ಯಹ್ಯಾ ಭಟ್ಕಲ್, ಇಬ್ರಾಹೀಂ ಹೊನ್ನಾವರ, ಉಸ್ಮಾನ್ ಟೊಂಕ, ಅಬ್ದುಲ್ ರಝಾಖ್ ಕರ್ಕಿ, ಹುಸೈನ್‌ ಬಿಜಾಪುರ, ಅಬ್ದುಲ್ ಹಮೀದ್ ತಗ್ಗರಗೋಡು, ಅಶ್‌ರಫ್  ಭಟ್ಕಲ್, ಫೈರೋಝ್ ದಾಂಡೇಲಿ, ಶರೀಫ್ ಗುಲ್ಮಿ, ಅನ್ವರ್ ಹೊನ್ನಾವರ, ಮುಸ್ತಫಾ ಸರ್ಪನಕಟ್ಟೆ, ಯಾಸೀನ್ ಮುರ್ಡೇಶ್ವರ ಇವರನ್ನು ಆರಿಸಲಾಯಿತು.

Similar News