ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ: ​ಕಾಸರಗೋಡು ಕ್ರೈಂ ಬ್ರಾಂಚ್ ಇನ್ಸ್‌ಪೆಕ್ಟರ್ ಶಿವಶಂಕರ್ ಅಮಾನತು

Update: 2023-03-10 16:46 GMT

ಕಾಸರಗೋಡು: ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಕಾಸರಗೋಡು ಕ್ರೈಂ ಬ್ರಾಂಚ್ ಇನ್ಸ್‌ಪೆಕ್ಟರ್ ಆರ್. ಶಿವಶಂಕರ್ ನನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅನಿಲ್ ಕಾಂತ್ ಆದೇಶ ಹೊರಡಿಸಿದ್ದಾರೆ.

ದೂರು ನೀಡಲು ಬಂದಿದ್ದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಂತೆ ಈ ಕ್ರಮ ತೆಗೆದುಕೊಳ್ಳಲಾ ಗಿದೆ. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕಾರಣ ಕೇಳಿ ನೋಟೀಸ್  ನೀಡಿದ್ದರು. ಆದರೆ ಶಿವಶಂಕರ್ ನೀಡಿದ ಉತ್ತರ ತೃಪ್ತಿ ಕರ  ಇಲ್ಲದ ಕಾರಣ  ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಈ ಹಿಂದೆ ಹಲವು ಬಾರಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ  ಶೋಕಾಸ್ ನೋಟೀಸ್ ನೀಡಲಾಗಿತ್ತು. ಆದರೆ  ಮತ್ತೆ ಲೋಪ ಎಸಗಿರುವ ಬಗ್ಗೆ ಲಭಿಸಿದ ದೂರಿನಂತೆ ಕ್ರಮ ತೆಗೆದುಕೊಳ್ಳಲಾಗಿದೆ. 2006 ರಿಂದ ಹಲವು ಬಾರಿ ಶಿಸ್ತು ಕ್ರಮಕ್ಕೆ  ಒಳಗಾಗಿದ್ದು, ನಾಲ್ಕು ಬಾರಿ ಅಮಾನತು ಶಿಕ್ಷೆಗೊಳಗಾಗಿದ್ದರು. ಅಕ್ರಮ ಸಂಪತ್ತು,  ಮಾನಭಂಗ, ಅಮಾಯಕರ ಮೇಲೆ  ಮೊಕದ್ದಮೆ ದಾಖಲು ಹೀಗೆ ಹಲವು ದೂರುಗಳು ಈತನ ಮೇಲಿದೆ. ಈ ಎಲ್ಲಾ ಅಂಶಗಳ ಕಾರಣ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News