ಅರಣ್ಯ ಇಲಾಖೆಯ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ವೇಳೆ ಹಿಂಸಾತ್ಮಕ ಘರ್ಷಣೆ: 13 ಮಂದಿಗೆ ಗಾಯ
ತಂಡ ಆಗಮಿಸದಂತೆ ಬಿಲ್ಲು-ಬಾಣಗಳು, ದೇಶಿ ನಿರ್ಮಿತ ಬಂದೂಕು ಬಳಸಿದ ಅತಿಕ್ರಮಣಕಾರರು
ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ನಡೆಸಿದ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ವೇಳೆ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ವಾಸವಾಗಿರುವವರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ.
ಅತಿಕ್ರಮಣ ವಿರೋಧಿ ತಂಡ ಆಗಮಿಸದಂತೆ ತಡೆಯಲು ಅತಿಕ್ರಮಣಕಾರರು ಕಚ್ಚಾ ಬಾಂಬ್ಗಳು, ಬಿಲ್ಲುಗಳು ಹಾಗೂ ಬಾಣಗಳು ಮತ್ತು ದೇಶಿ ನಿರ್ಮಿತ ಬಂದೂಕುಗಳನ್ನು ಬಳಸುತ್ತಿರುವ ಆಘಾತಕಾರಿ ದೃಶ್ಯಗಳು ಕಂಡುಬಂದಿವೆ.
ಘಘ್ರಾಲಾ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ನಡೆದಿದ್ದು, ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವ ವರದಿ ಬಂದ ನಂತರ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ ಈ ಘಟನೆ ನಡೆದಿದೆ. ಬಿಲ್ಲು ಮತ್ತು ಬಾಣಗಳು, ಕಲ್ಲುಗಳು, ದೇಶ ನಿರ್ಮಿತ ಬಾಂಬ್ಗಳು ಮತ್ತು ಇತರ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ಕನಿಷ್ಠ 150 ಜನರು ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿದರು.
"ಮೂರು ದಿನಗಳಿಂದ ಸುಮಾರು 200 ಅತಿಕ್ರಮಣದಾರರು ಅರಣ್ಯಕ್ಕೆ ಆಗಮಿಸಿದ್ದಾರೆ. ಅವರು ದೇಶೀ ನಿರ್ಮಿತ ಬಾಂಬ್ಗಳನ್ನು ಹೊತ್ತೊಯ್ದು ಗುಂಡಿನ ದಾಳಿ ನಡೆಸುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಡಿಎಫ್ಒ ಅವರು ಎಸ್ಪಿ ಮತ್ತು ಜಿಲ್ಲಾಧಿಕಾರಿಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ''ಎಂದು ಅರಣ್ಯ ಇಲಾಖೆ ಅಧಿಕಾರಿ ಆರ್.ಪಿ. ರಾಯ್ ಅವರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
On Camera, Encroachers Shoot Arrows, Lob Bombs To Foil Eviction Exercise https://t.co/yxdEfUGrFC pic.twitter.com/E0XNvlIdcV
— NDTV (@ndtv) March 12, 2023