ಚಾಲಕ ಆತ್ಮಹತ್ಯೆ

Update: 2023-03-13 16:11 GMT

ಹಿರಿಯಡ್ಕ : ಅನಾರೋಗ್ಯದಿಂದ ಬಳಲುತ್ತಿದ್ದ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.12ರಂದು ರಾತ್ರಿ ವೇಳೆ ಪೆರ್ಣಂಕಿಲ ಗ್ರಾಮದ ಮೊಲಿಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಪೆರ್ಣಂಕಿಲ ಗ್ರಾಮದ ಮ್ಯೂಲಿಬೆಟ್ಟು ನಿವಾಸಿ ಬಾಲಚಂದ್ರ (40) ಎಂದು ಗುರುತಿಸಲಾಗಿದೆ. ಚಾಲಕ ಕೆಲಸ ಮಾಡುತ್ತಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇದೇ ವಿಚಾರದಲ್ಲಿ ಮಾನಸಿಕವಾಗಿ ನೊಂದು ಮನೆಯ ಕೊಟ್ಟಿಗೆ ಬಳಿಯಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News