ಕಾರು ಢಿಕ್ಕಿ: ಬೈಕ್ ಸಹಸವಾರೆ ಮೃತ್ಯು
Update: 2023-03-14 15:38 GMT
ಗಂಗೊಳ್ಳಿ : ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರೆ ಮೃತಪಟ್ಟ ಘಟನೆ ಮಾ.13ರಂದು ಸಂಜೆ ವೇಳೆ ಕುಂದಬಾರಂದಾಡಿ ಗ್ರಾಮದ ಕೊಳೂರು ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಕುಂದಬಾರಂದಾಡಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ನಿವಾಸಿ ಜಗದೀಶ ಆಚಾರ್ಯ ಎಂಬವರ ಪತ್ನಿ ಸುಲೇಖ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಜಗದೀಶ್ ಆಚಾರ್ಯ ಮತ್ತು ಸಹ ಸವಾರೆ ಇವರ ಮಗಳು ಗಾಯಗೊಂಡಿದ್ದಾರೆ.
ಕುಂದಬಾರಂದಾಡಿ ಕಡೆಯಿಂದ ಕಟ್ಟಿನಮಕ್ಕಿ ಕಡೆಗೆ ಹೋಗುತ್ತಿದ್ದ ಬೈಕಿಗೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೈಕಿನಲ್ಲಿದ್ದ ಮೂವರು ರಸ್ತೆಗೆ ಬಿದ್ದು ಗಾಯಗೊಂಡರು. ಇದರಲ್ಲಿ ಗಂಭೀರ ವಾಗಿ ಗಾಯ ಗೊಂಡಿದ್ದ ಸುಲೇಖ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.